ಹೊಸದಿಗಂತ ವರದಿ, ಅಂಕೋಲಾ
ಚಲಿಸುತ್ತಿರುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಹೊಸಗದ್ದೆಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಹೊಸಗದ್ದೆ ನಿವಾಸಿ ರವಿ ರಾಮಚಂದ್ರ ನಾಯಕ (48) ಮೃತ ದುರ್ದೈವಿ. ಈತ ಟಾಟಾ ಎಸ್ ಪಿಕಪ್ ವಾಹನ ಚಾಲಾಯಿಸುವ ವೃತ್ತಿಯನ್ನು ಮಾಡಿಕೊಂಡಿದ್ದ.
ಅವಿವಾಹಿತನಾಗಿದ್ದ ಈತ ಸಗದ್ದೆಯಲ್ಲಿ ಪ್ರತ್ಯೇಕ ಮನೆ ಮಾಡಿ ಒಬ್ಬನೇ ವಾಸವಾಗಿದ್ದ. ಮನೆಗೆ ತೆರಳಲು ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಹರಿದು ಮೃತಪಟ್ಟಿದ್ದಾನೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಮರಕ್ಕೆ ಡಿಕ್ಕಿಯಾದ ಕಾರು; ಮೂವರಿಗೆ ಗಾಯ
ಮರಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಅಂಕೋಲ ತಾಲೂಕಿನ ವಂದಿಗೆ ಗ್ಬರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಿವಾಸಿ ರಾಘವೇಂದ್ರ ಪುಂಡಲೀಕ ರೇವಣಕರ(43) ಹಾವೇರಿ ಭಾರತೀನಗರ ನಿವಾಸಿ ಮಂಜುನಾಥ ಭಾಸ್ಕರ ರೇವಣಕರ್ (40) ಮತ್ತು ಕಾರು ಚಾಲಕ ದಾವಣಗೆರೆ ಕಾಯಿಪೇಟೆ ನಿವಾಸಿ ಕೃಷ್ಣಮೂರ್ತಿ ಗೋಪಾಲ ಕುಡ್ತರಕರ್ (50) ಗಾಯಗೊಂವರು. ಕಾರವಾರ ಕಡೆಯಿಂದ ಕುಮಟಾ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಎಡಬದಿಯ ಮರಕ್ಕೆ ಬಡಿದು ಅಪಘಾತ ಸಂಭವಿಸಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.