ಹೊಸದಿಗಂತ ವರದಿ, ಅಂಕೋಲಾ:
ಗೊಬ್ಬರ ತಯಾರಿಸಲು ತರಗೆಲೆ ತರಲು ಕಾಡಿಗೆ ಹೋದ ವ್ಯಕ್ತಿ ಗಂಗಾವಳಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಹೆಬ್ಬುಳದಲ್ಲಿ ಸಂಭವಿಸಿದ್ದು ಮಾಸ್ತಿಕಟ್ಟಾ ಎಳ್ಳೆಗುಳಿ ಬಳಿ ಗಂಗಾವಳಿ ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಹೆಬ್ಬುಳ್ ಗ್ರಾಮದ ಕೇಶವ ಶಾಂತಾ ನಾಯ್ಕ (60) ಎಂದು ಗುರುತಿಸಲಾಗಿದ್ದು ಕೃಷಿಕನಾಗಿರುವ ಈತ ರವಿವಾರ ಮದ್ಯಾಹ್ನ ಗೊಬ್ಬರ ತಯಾರಿಸಲು ಒಣ ಎಲೆಗಳನ್ನು ತರಲು ಮನೆಯ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದ, ಆಕಸ್ಮಿಕವಾಗಿ ಕಾಲು ಜಾರಿ ಗಂಗಾವಳಿ ನದಿಯಲ್ಲಿ ಬಿದ್ದು ಮುಳುಗಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.