ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲವೊಮ್ಮೆ ಮನುಷ್ಯರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಯಡವಟ್ಟಿನಿಂದಾಗಿ ಒಂದು ಜೀವವೇ ಬಲಿಯಾಗಿರುತ್ತದೆ. ಅಂತಹುದೇ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದ ಎಂಬ ಕಾರಣಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ ಕಂಡಿದೆ.

ಮುಂಬೈನ ಸಿಯಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಆಗಸ್ಟ್‌ 13ರ ರಾತ್ರಿ 9:15ರ ಸುಮಾರಿಗೆ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದ ಎಂಬ ಕಾರಣಕ್ಕೆ ಆರೋಪಿ ಮಹಿಳೆ ಜಗಳ ಶುರು ಮಾಡಿದ್ದಾಳೆ. ಬಳಿಕ ವ್ಯಕ್ತಿಯನ್ನು ಆಕೆ ಥಳಿಸಿದ್ದಾಳೆ, ಬಳಿಕ ಆಕೆಯ ಪತಿ ಕಪಾಳಮೋಕ್ಷ ಮಾಡಿದ್ದಾನೆ. ಆಗ ಸಮತೋಲನ ಕಳೆದುಕೊಂಡ ವ್ಯಕ್ತಿ ರೈಲ್ವೆ ಟ್ರ್ಯಾಕ್‌ ಮೇಲೆ ಬಿದ್ದಿದ್ದಾನೆ. ಈ ವೇಳೆ ಲೋಕಲ್ ಟ್ರೈನ್ ಸಮೀಪಿಸಿದೆ. ಆ ವ್ಯಕ್ತಿ ಬೇಗನೆ ಎದ್ದು ಪ್ಲಾಟ್‌ಫಾರ್ಮ್ ಮೇಲೆ ಏರಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾನೆ. ಆದರೆ ಆ ವೇಳೆಗಾಗಲೇ ರೈಲು ಪ್ಲಾಟ್ ಫಾರ್ಮ್ ಗೆ ಪ್ರವೇಶಿಸಿದ ಕಾರಣ, ಆತ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡು ಪ್ರಾಣಬಿಟ್ಟಿದ್ದಾನೆ.

ವ್ಯಕ್ತಿಯ ಸಾವಿಗೆ ಕಾರಣವಾದ ಶೀತಲ್ ಮಾನೆ (30) ಮತ್ತು ಆಕೆಯ ಪತಿ ಅವಿನಾಶ್ (35)ಅನ್ನು
ದಾದರ್ ಸರ್ಕಾರಿ ರಿಸರ್ವ್ ಪೊಲಿಸ್ (ಜಿಆರ್‌ಪಿ) ಕ್ರೈಂ ಬ್ರಾಂಚ್ ಪಡೆ ಅರೆಸ್ಟ್‌ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!