ಮಂಗಳೂರು ಕುಕ್ಕರ್ ಬಾಂಬ್ | ಶಂಕಿತ ಬೇರೆಡೆ​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದ: ಎಡಿಜಿಪಿ ಅಲೋಕ್​​ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ನಾಗುರಿ ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆಸಂಬಂಧಿಸಿದಂತೆ, ಆಟೋ ಪ್ರಯಾಣಿಕ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದರು. ಆಕಸ್ಮಿಕವಾಗಿ ಆಟೋದಲ್ಲಿ ಬಾಂಬ್​ ಬ್ಲಾಸ್ಟ್​​ ಆಗಿದೆ ಎಂದು ಎಡಿಜಿಪಿ ಅಲೋಕ್​​ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಪ್ರಕರಣದಲ್ಲಿ ಇರೋದು ಯಾರು ಅನ್ನೋ ಮಾಹಿತಿ ಸಿಕ್ಕಿದೆ. ಶಂಕಿತನಿಗೆ ಲಿಂಕ್​ ಇರುವ ಎಲ್ಲಾ ಸ್ಥಳಕ್ಕೂ ನಮ್ಮ ತಂಡ ಹೋಗಿದೆ. ಶಂಕಿತನ ಗುರುತು ಖಚಿತಪಡಿಸಲು ಅವರ ಸಂಬಂಧಿಕರನ್ನು ಕರೆದಿದ್ದೇವೆ. ಸಂಬಂಧಿಕರು ಗುರುತಿಸಿದ ನಂತರ ಆರೋಪಿ ಯಾರು ಅಂತ ಖಚಿತಪಡಿಸುತ್ತೇವೆ ಎಂದು ತಿಳಿಸಿದರು.

ಪ್ರಸುತ್ತ ಆರೋಪಿಯ ಮುಖದಲ್ಲಿ ಶೇಕಡಾ 45ರಷ್ಟು ಸುಟ್ಟಗಾಯವಾಗಿದೆ.ಆತ ಮಾತನಾಡುವ ಪರಿಸ್ಥಿತಿಯಲ್ಲಿ ಆರೋಪಿ ಇಲ್ಲ. ಇಂದು ರಾತ್ರಿ ಅಥವಾ ನಾಳೆವರೆಗುವಿಚಾರಣೆ ಮುಂದುವರಿಯಲಿದೆ. ಚುರುಕಿನಿಂದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!