ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ಗೂ ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ಗೂ ಯಾವುದೇ ಸಾಮ್ಯತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಸ್ಫೋಟ ನಡೆಸಿದ್ದಾನೆ. ಅನುಮಾನ ಬಾರದಂತೆ ಇರಲಿ ಮೊದಲು ಟೋಕನ್ ಪಡೆದು ತಿಂಡಿ ತೆಗೆದುಕೊಂಡಿದ್ದಾನೆ. ಹೊಟೇಲ್ನಲ್ಲೇ ಕುಳಿತು ಟೈಮರ್ ಸೆಟ್ ಮಾಡಿ ಬ್ಲಾಸ್ಟ್ ಮಾಡಿದ್ದಾನೆ.
ಆರೋಪಿ ಯಾರೇ ಆಗಿದ್ದರೂ ಬಿಡೋದಿಲ್ಲ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.