ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನೇ ಮಾಡಿದ್ರು ನಿಮ್ಮ ಜೇಬಿನಲ್ಲಿ ಹಣ ಇರಲ್ವಾ? ಎಷ್ಟೇ ಕಮ್ಮಿ ಖರ್ಚು ಮಾಡಿದ್ರು ದುಡ್ಡು ಉಳಿತಾಯ ಆಗತಿಲ್ವಾ? ಹಾಗಾದ್ರೆ ನಿಮ್ಮ ಜೇಬಿನಲ್ಲಿ ಹಣ ಉಳಿಬೇಕು ಅಂದ್ರೆ ಏನು ಮಾಡಬೇಕು? ಇದಕ್ಕೆ ಪರಿಹಾರ ಏನು? ಇದಕ್ಕೆಲ್ಲ ಪರಿಹಾರ ನಿಮ್ಮ ಮನೆಯಲ್ಲೇ ಸಿಗುವ ಸುಲಭ ವಸ್ತುಗಳಿಂದ ಸಲಹೆ ಸಿಗುತ್ತದೆ. ಹಾಗಾದ್ರೆ ಬನ್ನಿ ನೋಡೋಣ ಏನದು ಪರಿಹಾರ ಅನ್ನೋದನ್ನ..
ನಿಮ್ಮ ಜೇಬಿನಲ್ಲಿ ಹಣ ನಿಲ್ಲದೇ ಇದ್ದರೆ, ಮತ್ತು ನಿಮ್ಮ ಬಳಿ ಹಣ ಯಾವಾಗಲೂ ತುಂಬಿರಬೇಕು ಎಂದು ನೀವು ಬಯಸಿದ್ರೆ, ನೀವು ಈ ಸಣ್ಣ ಕ್ರಮವನ್ನು ಅನುಸರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ನೀವು ಪ್ರತಿದಿನ ಐದು ಕಾಳು ಕರಿಮೆಣಸನ್ನು ದೀಪದಲ್ಲಿ ಸುಡಬೇಕು. ಇದು ಹಣದ ಕೊರತೆಯನ್ನು ನಿವಾರಿಸುತ್ತದೆ.
ನಿಮಗೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಅನಿಸಿದರೆ ಮತ್ತು ಆ ಕಾರಣದಿಂದಾಗಿ ನಿಮ್ಮ ಕುಟುಂಬದ ಜನರ ಆರೋಗ್ಯವು ಪದೇ ಪದೇ ಹದಗೆಡುತ್ತಿದೆ ಎಂದು ನಿಮಗೆ ಅನಿಸಿದರೆ ಆವಾಗಲೂ ಸಹ ಕರಿಮೆಣಸು ನಿಮ್ಮ ಸಹಾಯಕ್ಕೆ ಬರುತ್ತೆ. ಇದಕ್ಕಾಗಿ, ನೀವು ಐದು ಕಾಳು ಕರಿಮೆಣಸನ್ನು ನಿಮ್ಮ ಮೇಲೆ ಅಥವಾ ಯಾವ ವ್ಯಕ್ತಿಯ ಮೇಲೆ ದೃಷ್ಟಿ ಬಿದ್ದಿದೆಯೋ ಅವರ ಮೇಲೆ ಏಳು ಬಾರಿ ತಿರುಗಿಸಬೇಕು. ಇದನ್ನು ಏಳು ಬಾರಿ ತಿರುಗಿಸಿ ಮತ್ತು ದೀಪದಿಂದ ಅವುಗಳನ್ನು ಸುಡಿ, ಇದು ಕೆಟ್ಟ ದೃಷ್ಟಿಯನ್ನು ತೆಗೆದುಹಾಕುತ್ತದೆ.
ನೀವು ಕೆಲವು ಕೆಲಸಗಳನ್ನು ಮಾಡಲು ಬಯಸಿದರೆ ಮತ್ತು ಅದರಲ್ಲಿ ಯಾವುದೇ ರೀತಿಯ ಅಡೆತಡೆ ಕಂಡು ಬಂದರೆ, ಕರಿಮೆಣಸನ್ನು ದೀಪದಿಂದ ಸುಡಿರಿ. ಇದನ್ನು ಮಾಡುವುದರಿಂದ, ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ. ಜೀವನದಲ್ಲಿನ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ ಮತ್ತು ಎಲ್ಲಾ ರೀತಿಯ ಕೆಲಸಗಳು ಪೂರ್ಣಗೊಳ್ಳುತ್ತವೆ.