ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ನಲ್ಲಿ 2019 ರಲ್ಲಿ ನಡೆದ ತರಣ್ ತಾರಣ್ ಬಾಂಬ್ ಸ್ಫೋಟದ ಹಿಂದಿನ ಮಾಸ್ಟರ್ಮೈಂಡ್ ಅನ್ನು ದೆಹಲಿಯಲ್ಲಿ ಎನ್ಐಎ ಗುರುವಾರ ಬಂಧಿಸಿದೆ .
ಬಿಕ್ರಮ್ಜಿತ್ ಸಿಂಗ್ ಅಲಿಯಾಸ್ ಬಿಕ್ಕರ್ ಬಾಬಾನನ್ನು ವಿಯೆನ್ನಾದಿಂದ ಭಾರತಕ್ಕೆ ಹಸ್ತಾಂತರಿಸಿದ ನಂತರ ದೆಹಲಿಯಲ್ಲಿ ಎನ್ಐಎ ತಂಡ ಬಂಧಿಸಿದೆ.
ಪಂಜಾಬ್ನಲ್ಲಿ ದಾಳಿ ನಡೆಸಲು ಬಿಕ್ರಮಜಿತ್ ಸಿಂಗ್ ತನ್ನ ಆಪ್ತರೊಂದಿಗೆ ಸೇರಿ ಭಯೋತ್ಪಾದಕ ಗುಂಪನ್ನು ರಚಿಸಿದ್ದ ಎಂದು ಮೂಲಗಳು ತಿಳಿಸಿವೆ.
ಮೊಹಾಲಿಯ ಎನ್ಐಎ ವಿಶೇಷ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರಂಟ್ ವನ್ನು ಹೊರಡಿಸಿತ್ತು. ಇದಾದ ಬಳಿಕ ಈತನನ್ನು ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಆಸ್ಟ್ರಿಯಾದ ಲಿಂಜ್ನಲ್ಲಿ ಬಂಧಿಸಲಾಯಿತು.