ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸ್ಥಳೀಯರಲ್ಲದ ಡ್ರೈಫ್ರೂಟ್ಸ್ ಮಾರಾಟಗಾರನನ್ನು ಬುಧವಾರ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಶ್ರೀನಗರದ ಹಬಾ ಕಡಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಮೃತರನ್ನು ಅಮೃತಸರ ಮೂಲದ ಸಿಖ್ ಎಂದು ಗುರುತಿಸಲಾಗಿದೆ.