ಸಚಿವರಾದ ಜೊಲ್ಲೆ – ಆನಂದ್ ಸಿಂಗ್ ಅವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಿಎಂ

ಹೊಸ ದಿಗಂತ ವರದಿ, ಹಂಪಿ:

ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಆನಂದ್ ಸಿಂಗ್ ಅವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಹಂಪಿ ಉತ್ಸವದಲ್ಲಿ ಜನರ ಸಂಖ್ಯೆ ಕಡಿಮೆ ಎಂದು ಇದನ್ನೇ ಭಿನ್ನಾಭಿಪ್ರಾಯ ಎನ್ನುವುದು ಸರಿಯಲ್ಲ, ಅವರಿಬ್ಬರೂ ಜೊತೆಗೂಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಸಂಜೆ ಮಾತನಾಡಿದರು.

ಕೊರೋನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ಆಚರಿಸಿರಲಿಲ್ಲ, ಇಂದು ಉತ್ಸವದ ಮೊದಲನೇ ದಿನವಾಗಿದ್ದು, ಜನರ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು, ಇದನ್ನು ಸಚಿವರಿಬ್ಬರ ಮದ್ಯೆ ಭಿನ್ನಾಭಿಪ್ರಾಯ ಎನ್ನುವುದು ಸರಿಯಲ್ಲ, ಮನೋರಂಜನೆ ಕಾರ್ಯಕ್ರಮಗಳು ಶುರುವಾಗಲಿದ್ದು, ಜನರು ವೀಕ್ಷಣೆಗೆ ಆಗಮಿಸಲಿದ್ದಾರೆ. ಇದು ವಿಜಯನಗರ ಗತ ವೈಭವ ಸಾರುವ ಉತ್ಸವ ಇದಾಗಿದ್ದು, ಪ್ರವಾಸೋದ್ಯಮ ಸಚಿವರು ನೂತನ ಜಿಲ್ಲೆಯನ್ನು ಪಡೆದುಕೊಂಡ ಬಳಿಕ ನಡೆಯಲಿರುವ ಮೊದಲ ಉತ್ಸವ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀರಾಮುಲು, ಹಾಲಪ್ಪ ಬಸಪ್ಪ ಆಚಾರ್ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!