ಸಚಿವ ಜಮೀರ್ ಅಹ್ಮದ್ ಮನೆಗೆ ಕನ್ನ ಹಾಗೂ ಬರೋಬ್ಬರಿ ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕದ್ದಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀರ್ ಅಹ್ಮದ್ ಮನೆಯಲ್ಲಿದ್ದ 1 ಕೆಜಿ 200 ಗ್ರಾಂ ಚಿನ್ನಾಭರಣ ಎಗರಿಸಿದ್ದ ಅಮೀರ್ ಅಹ್ಮದ್ ಹಾಗೂ ಅವೀನ್ ಬಂಧಿತರು.
ಇವರಿಬ್ಬರು ಜಮೀರ್ ಮನೆಗೆ ಮೂರು ವರ್ಷಗಳಿಂದ ಬರುತ್ತಿದ್ದರು. ಮನೆಯವರ ನಂಬಿಕೆ ಗಳಿಸಿದ್ದರು. ಮೂರು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಜಮೀರ್ ಆರೋಗ್ಯದಲ್ಲಿ ಏರುಪೇರಾದಾಗ ಹೆಚ್ಚು ಸಮಯ ಮನೆಯಲ್ಲಿಯೇ ಇವರು ಕಳೆಯುತ್ತಿದ್ದರು.
ಟ್ರಾವೆಲ್ ಬ್ಯುಸಿನೆಸ್ನಲ್ಲಿದ್ದ ಆರೋಪಿಗಳು ಕಂಪನಿಯಲ್ಲಿ ಲಾಸ್ ಅನುಭವಿಸಿದ್ದರು. ಇದಕ್ಕಾಗಿ ಕಳ್ಳತನದ ದಾರಿ ಹಿಡಿದ್ದಾರೆ. ಈ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವ ಪ್ಲಾನ್ ಮಾಡಿದ್ದಾರೆ. ಮನೆಯಲ್ಲಿ ಆಭರಣಗಳು ಕಳವಾದ ನಂತರ ಇವರಿಗೆ ಕರೆ ಮಾಡಲಾಗಿತ್ತು. ಆದರೆ ಇವರು ಉತ್ತರ ನೀಡಲಿಲ್ಲ. ಇದರಿಂದ ಶಿವಾಜಿನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.



