August 10, 2026
Monday, August 10, 2026
spot_img

ತುಂಗಾಭದ್ರಾ ನದಿ ತಟದಲ್ಲಿರುವ ದೇವಸ್ಥಾನದಲ್ಲಿ ಶಿವಲಿಂಗ ವಿರೂಪಗೊಳಿಸಿದ ದುಷ್ಕರ್ಮಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ಬಳಿ ದೇವರ ವಿಗ್ರಹವನ್ನು ವಿರೂಪಗೊಳಿಸಲಾಗಿದೆ.

ತುಂಗಭದ್ರಾ ನದಿಯ ದಡದಲ್ಲಿರುವ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಶಿವಲಿಂಗ ಮತ್ತು ನಂದಿ ಮತ್ತು ಹೊನ್ನತೆಮ್ಮ ದೇವಿ ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ. ರಾಮಲಿಂಗೇಶ್ವರ ಲಿಂಗದ ನೀರಿನ ಬಟ್ಟಲು ಮತ್ತು ನಂದಿ ವಿಗ್ರಹದ ಮುಖವು ಹಾನಿಗೊಳಗಾಗಿವೆ.

ಶಿವರಾತ್ರಿ ಹಬ್ಬದಂದು ದೇವರಿಗೆ ವಿಶೇಷ ಪೂಜೆ ನಡೆಸುವ ಸಲುವಾಗಿ ಬಂದು ನೋಡಿದಾಗ ಭಕ್ತರು, ಅರ್ಚಕರು ಶಾಕ್‌ ಆಗಿದ್ದಾರೆ. ದೇವಾಲಯವು ಗ್ರಾಮದಿಂದ ದೂರದಲ್ಲಿರುವುದರಿಂದ ಯಾವುದೇ ಶಬ್ದ ಕೇಳಿಸಲಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಮತ್ತು ಅಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾಧಿಕಾರಿಗೆ ಮನವಿ ಮಾಡಲು ಅವರು ನಿರ್ಧರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !