ಹೊಸ ದಿಗಂತ ವರದಿ, ಕಲಬುರಗಿ
ಮಂಗಳವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಟ್ರ್ಯಾಕ್ಸ್, ನ ಟಾಯರ್, ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಗರದ ಜೆ.ಡಿ.ಎ.ಕಾಲೋನಿಯ ಶಹಾಬಜಾರ ಗೋಕುಲ ನಗರದಲ್ಲಿ ನಡೆದಿದೆ.
ಕಿರಣ ತಂದೆ ಶಿವಪ್ಪಾ ಹಂಗರಗಾ ಕೆ ಎಂಬುವವರಿಗೆ ಸೇರಿದ ವಾಹನ ಸಂಖ್ಯೆ K A -32-AA 1776 ಇದಾಗಿದ್ದು,ಮಂಗಳವಾರ ಮಧ್ಯರಾತ್ರಿ 1-30 ಗಂಟೆಗೆ ನಿಂತಿದ್ದ ವಾಹನದ ಟಾಯರ್,ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.