ಶಾಸಕ ಪ್ರಿಯಾಂಕ್ ಖರ್ಗೆಗೆ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ: ಲಕ್ಷ್ಮಣ ಸವದಿ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದ ಹೆಣ್ಣು ಮಕ್ಕಳ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಆಡಿರುವ ಮಾತಿಗೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರ ತಂದೆಯವರಿಗೆ ಬಂದ ಪರಿಸ್ಥಿತಿ ಅವರಿಗೂ ಬರುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾರ್ಮಿಕವಾಗಿ ಹೇಳಿದರು.

ಚಿತ್ತಾಪೂರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಅವರು ವಿನಾಶ ಕಾಲಕ್ಕೆ ಹೆಣ್ಣುಮಕ್ಕಳ ಬಗ್ಗೆ ಮಾತಾಡ್ತಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು.

ನಾವು ಚಿತ್ತಾಪುರಕ್ಕೆ ಬಂದಿರುವುದು ಬಾಬುರಾವ್ ಚಿಂಚನಸೂರ್ ಅಭಿನಂದನಾ ಸಮಾರಂಭ ನೇಪಮಾತ್ರ. ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ, ಇಲ್ಲಿನ ಶಾಸಕರನ್ನು ಮನೆಗೆ ಕಳುಹಿಸಬೇಕು. ಹಿಂದೆ ಉಪ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಸೋಲಿನ ರುಚಿ ಕಂಡಿದರು. ಇವಾಗ ಮತ್ತೆ 2023ರಲ್ಲಿ ಸೋಲಿನ ರುಚಿ ನೋಡುವುದು ಖಚಿತ ಎಂದರು.

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಜೆಡಿಎಸ್, ಕಾಂಗ್ರೆಸ್ ನ 50 ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಚಿತ್ತಾಪುರ ಕ್ಷೇತ್ರವು ಪಾಯಿಂಟ್ ಔಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ನವರು ‌ಭೇಟಿ ನೀಡಲಿದ್ದು, ಪಕ್ಷದ ಗೆಲುವಿಗಾಗಿ ಎಲ್ಲ ರೀತಿಯಲ್ಲಿ ಶ್ರಮಿಸಲಾಗುವುದು. ಪಕ್ಷದ 120 ಸ್ಥಾನಗಳಲ್ಲಿ 20 ರಿಂದ 25 ಸೋಲುವ ಕ್ಷೇತ್ರಗಳಿದು, ಅವುಗಳ ಗೆಲ್ಲಲು ಒತ್ತು ನೀಡಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!