ಮಾಚ್೯ನ ಒಳಗೆ 16 ಲಕ್ಷ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ: ಸಚಿವ ವಿ‌‌‌.ಸೋಮಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರಕ್ಕೆ ವಸತಿ ವ್ಯವಸ್ಥೆ ಯಲ್ಲಿ ಒಂದೇ ವಿಷನ್ ತರಬೇಕೆಂಬ ಪ್ರಧಾನ ಮಂತ್ರಿ ಗಳ ಆಶಯದಂತೆ ರಾಜ್ಯದಲ್ಲಿ ಕೂಡಾ ವಸತಿ ಯೋಜನೆಯ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದೆ.ಹಿಂದೆ ಇದ್ದ ಸರಕಾರ ಮಾಡಿದ ಲೋಹಗಳನ್ನು ಸರಿಪಡಿಸಿಕೊಂಡು ಇಡೀ ರಾಜ್ಯಕ್ಕೆ ಒಂದೇ ಸಾಪ್ಟ್ ವೇರ್ ಆರಂಭಿಸಿ ನಿಜವಾದ ಬಡವರು ಯಾರಿದ್ದಾರೆ ಅವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.ಸುಮಾರು 7 ಸಾವಿರ ಕೋಟಿ ಹಣವನ್ನು ಅವರವರ ಖಾತೆಗೆ ಜಮಾ ಮಾಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮಾಡಲಾಗಿದೆ.
ಅಲ್ಲದೆ ಈ ಹಿಂದಿನ ಸರಕಾರದ ಕಾಲದಲ್ಲಿಹಣಬಿಡುಗಡೆಯಾಗದವರಿಗೆ ಹಣ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರುಮುಖ್ಯಮಂತ್ರಿ ಗಳಾದ ಬಳಿಕ 5 ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಕ್ಕೆ 1 ಲಕ್ಷ ಮನೆಗಳನ್ನು ನಗರ ಪ್ರದೇಶಕ್ಕೆ ನೀಡಿದ್ದಾರೆ.5ಲಕ್ಷ ಮನೆಗಳಲ್ಲಿ 2ಲಕ್ಷದ 34 ಸಾವಿರ ಮನೆಗಳ ನಿರ್ಮಾಣಕಾರ್ಯಾರಂಭವಾಗಿದೆ ಎಂದು ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು‌.
ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸುಮಾರು 750 ಪಂಚಾಯತ್ ಗಳನ್ನು ಆಯ್ಕೆ ಮಾಡಿ ಲಕ್ಷಾಂತರ ಮನೆಗಳನ್ನು ನೀಡಲಾಗಿದೆ.ಈಗಾಗಲೇ ಕೆಲಸ ಆರಂಭವಾಗಿದೆ ಎಂದರು.
6 ಲಕ್ಷ ಮನೆಗಳು ಸೇರಿದಂತೆ ಹಿಂದಿನ ಸರಕಾರದ ಕಾಲದಲ್ಲಿ ಬಾಕಿ ಉಳಿದ 10ಲಕ್ಷ ಮನೆಗಳು ನಿರ್ಮಾಣಗೊಳ್ಳಲಿದೆ. ಇದರಲ್ಲಿ 6 ಲಕ್ಷ ಮನೆಗಳ ನಿರ್ಮಾಣ ಈಗಾಗಲೇ ಸಮಾಪ್ತಿ ಯಾಗಿದೆ. ಉಳಿದ ಮನೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಚ್೯ ನ ಒಳಗೆ ಎಲ್ಲಾ 16ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು.ಈ ಮೂಲಕ ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು.ಅಲ್ಲದೆ ಗುಣಮಟ್ಟದ ನಿವಾಸ ನಿರ್ಮಿಸಿ ನೀಡಲಾಗುವುದು ಎಂದು ನುಡಿದರು.
ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದಾಯದ ಮಿತಿಯನ್ನು 2ಲಕ್ಷಕ್ಕೆ ಏರಿಸಲಾಗಿದೆ.ಇತರ ಹಿಂದುಳಿದ ವರ್ಗದವರಿಗೆ ಇದ್ದವರಿಗೆ ವಾರ್ಷಿಕ ಆದಾಯವನ್ನು 1ಲಕ್ಷದ 20 ಸಾವಿರಕ್ಕೆ ಏರಿಸಲಾಗಿದೆ.ಅಲ್ಲದೆ ಬಿಪಿಎಲ್ ಕಾಡ್೯ ಇದ್ದವರಿಗೆ ಸರಕಾರದಿಂದ ಅನುಕೂಲ ಸೃಷ್ಟಿ ಮಾಡಲಾಗಿದೆ‌ ಎಂದು ಹೇಳಿದರು.
ಬ್ರಷ್ಠಾಚಾರ ತಡೆಯಲು ಸಲುವಾಗಿ ಇಲಾಖೆಗೆ ಪ್ರತ್ಯೇಕ ಆಪ್ ಮಾಡಲಾಗಿದೆ.ಈ ಮೂಲಕ ಪಾರದರ್ಶಕ ವ್ಯವಸ್ಥೆ ಗೆ ಯೋಜನೆ ಸಿದ್ದಪಡಿಸಲಾಗಿದೆ.ಈ ರೀತಿ ಇಲಾಖೆಗೆ ಹೊಸ ಸಾಪ್ಟ್ ವೇರ್ ಸಿದ್ದಪಡಿಸಿ ಸಾಮಾನ್ಯರಿಗೆ ಮತ್ತು ಬಡವರಿಗೆ ಪಾರದರ್ಶಕವಾಗಿ ಯೋಜನೆಗಳು ದೊರಕುವಂತೆ ಮಾಡಿದುದು ರಾಷ್ಟ್ರಕ್ಕೆ ಮೊದಲನೆಯದಾಗಿದೆ.
ನೆರೆ ಇತ್ಯಾದಿಗಳಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲು ಎ ಬಿ ಸಿ ಎಂಬ ವಿಂಗಡಣೆ ಇತ್ತು ಅದನ್ನು ತೆಗೆದುಹಾಕಿ ಸರಳೀಕರಣ ಗೊಳಿಸಲಾಗಿದೆ. ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ನುಡಿದರು.
ದೇವಳಕ್ಕೆ ಭೇಟಿ:
ಈ ಮೊದಲು ಕುಕ್ಕೆ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ಬಳಿಕ ಬೋಜನ ಪ್ರಸಾದ ಸ್ವೀಕರಿಸಿದರು.
ಇವರ ಜತೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಗಮಿಸಿದ್ದರು ‌ ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಾಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಎಇಒ ಪುಷ್ಪಲತಾ ರಾವ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!