Friday, March 24, 2023

Latest Posts

ಎಂಎಲ್‌ಸಿ ಆರ್. ಶಂಕರ್ ಮನೆ ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ರಾಶಿ ರಾಶಿ ಸೀರೆ, ಸ್ಕೂಲ್ ಬ್ಯಾಗ್ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೃಹ ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡಲು ತಂದಿದ್ದ ರಾಶಿ ರಾಶಿ ಸೀರೆಗಳು ಹಾಗೂ ಸ್ಕೂಲ್ ಬ್ಯಾಗ್, ತಟ್ಟೆ ಲೋಟಗಳನ್ನು ವಶಕ್ಕೆ ಪಡೆಯಲಾಗಿದೆ.

ಆರು ಸಾವಿರಕ್ಕೂ ಹೆಚ್ಚು ಸೀರೆ, ಒಂಬತ್ತು ಸಾವಿರಕ್ಕೂ ಹೆಚ್ಚು ಬ್ಯಾಗ್‌ಗಳು ಹಾಗೂ ತಟ್ಟೆಲೋಟ ವಶಕ್ಕೆ ಪಡೆಯಲಾಗಿದೆ, ಒಟ್ಟಾರೆ 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಏಳು ಗಂಟೆವರೆಗೆ ದಾಳಿ ನಡೆಸಿದ್ದು, ಒಟ್ಟಾರೆ ಎಂಟು ಕೋಟಿ ರೂಪಾಯಿಯಷ್ಟು ಮೌಲ್ಯದ ವಸ್ತುಗಳ ಪತ್ತೆಯಾಗಿದೆ. ಈ ವಸ್ತುಗಳ ಜಿಎಸ್‌ಟಿ ಬಿಲ್ ಕೇಳಿದ್ದು, ಬಿಲ್ ನೀಡಲು ಸಮಯ ಕೊಡಿ ಎಂದು ಆರ್. ಶಂಕರ್ ಮನವಿ ಮಾಡಿದ್ದಾರೆ. ಸರಿಯಾದ ಬಿಲ್ ಇಲ್ಲದಿದ್ದರೂ ದಂಡ ಬೀಳುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!