ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯವರ ಸಮಾವೇಶ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಪುಣೆ-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಐಟಿಸಿ ಹೋಟೆಲ್ನಿಂದ ಮಾಲಿನಿಗೆ ಪ್ರಯಾಣಿಸಲು ಪ್ರಧಾನಿ ಮೋದಿ ಬಯಸಿದ್ದಾರೆ. ಇದರಿಂದ ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ. ಪುಣೆಯಿಂದ ಬೆಳಗಾವಿಗೆ ಬರುವ ವಾಹನಗಳು ಸಂಕೇಶ್ವರ ಹುಕ್ಕೇರಿ ಮಾರ್ಗವಾಗಿ ತೆರಳುವಂತೆ ಸೂಚಿಸಲಾಗಿದೆ.
ಬಾಗಲಕೋಟೆಯಿಂದ ಬೆಳಗಾವಿಗೆ ತೆರಳುವ ವಾಹನಗಳು ನೇಸರಗಿ- ಗೋಕಾಕ್ ಮೂಲಕ ಹಾದು ಹೋಗಬೇಕು. ಧಾರವಾಡದಿಂದ ಬೆಳಗಾವಿಗೆ ತೆರಳುವ ವಾಹನಗಳು ನೇಗಿನಗಾಳ-ನೇಸರಗಿ ಮೂಲಕ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆಗ್ರಹಿಸಿದ್ದಾರೆ.