ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಪ್ರವಾಸ ಕೈಗೊಂಡಿದ್ದು, ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ.
#WATCH | Telangana | PM Narendra Modi flags off Vande Bharat Express between Secunderabad and Tirupati.
It will reduce the travel time between the two cities by almost three and a half hours. pic.twitter.com/UCMd6yuWqC
— ANI (@ANI) April 8, 2023
ಶನಿವಾರ ಸಿಕಂದರಾಬಾದ್ನಲ್ಲಿ ನೂತನ ರೈಲ್ವೇ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಿಕಂದರಾಬಾದ್ ನಿಲ್ದಾಣದಲ್ಲಿಯೇ ರೈಲಿಗೆ ಚಾಲನೆ ನೀಡಿದರು. ದೇಶದ 13 ನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿರುವ ಈ ರೈಲಿನ ವಿಶೇಷತೆಗಳ ಬಗ್ಗೆ ತಿಳಿಯಿರಿ.
- ಸಿಕಂದರಾಬಾದ್ನಿಂದ ತಿರುಪತಿಗೆ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸಲು 12 ಗಂಟೆ ತೆಗೆದುಕೊಳ್ಳುತ್ತದೆ. ಅದೇ ವಂದೇ ಭಾರತ್ ರೈಲಿನಲ್ಲಿ ಸಿಕಂದರಾಬಾದ್ನಿಂದ ತಿರುಪತಿಗೆ 8.30 ಗಂಟೆಗಳಲ್ಲಿ ತಲುಪಬಹುದು.
- ಇದು ದೇಶದ 13ನೇ ವಂದೇ ಭಾರತ್ ರೈಲು.. 8 ಕೋಚ್ಗಳು ಮತ್ತು 530 ಆಸನ ಸಾಮರ್ಥ್ಯ ಹೊಂದಿದೆ.
- 1 ಎಕ್ಸಿಕ್ಯೂಟಿವ್, 7 ಚೇರ್ ಕಾರ್ ಕೋಚ್ಗಳು ಇರುತ್ತವೆ.
- ಪ್ರಯಾಣಿಕರ ಬೇಡಿಕೆಯಿಂದಾಗಿ ಕೋಚ್ಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
- ರೈಲು 9 ರಿಂದ ಬೆಳಿಗ್ಗೆ 6 ಗಂಟೆಗೆ ಪ್ರಯಾಣಿಕರಿಗೆ ಲಭ್ಯವಿರುತ್ತದೆ.
- ವಂದೇ ಭಾರತ್ ರೈಲು ಸಿಕಂದರಾಬಾದ್-ತಿರುಪತಿ ನಡುವೆ ವಾರದಲ್ಲಿ 6 ದಿನ ಮಾತ್ರ ಚಲಿಸುತ್ತದೆ.