ಹೊಸದಿಗಂತ ವರದಿ, ಹಾವೇರಿ :
ಪ್ರಧಾನಿ ನರೇಂದ್ರಮೋದಿಯವರು ರಾಷ್ಟ್ರ ವಿರೋಧಿಗಳಿಗೆ, ಭಯೋತ್ಪಾದಕರಿಗೆ, ರಾಷ್ಟç ವಿರೋಧಿ ಚಟುವಟಿಕೆಗಳಲ್ಲಿ ತೊಂಡಗಿಕೊಳ್ಳುವವರಿಗೆ, ದೇಶದಲ್ಲಿ ಶಾಂತಿ ಕದಡುವವರಿಗೆ ಸಿಂಹ ಸ್ವಪ್ನವಾಗಿನೇ ಇರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಧಾನಮಂತ್ರಿಗಳ ವಿಷ ಸರ್ಪ ಇದ್ದಹಾಗೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರೀಯಿಸಿ. ದೇಶದ ಪ್ರಧಾನಂತ್ರಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಏಕೆ ಹೀಗೆ ಮಾತನಾಡಿದರೋ ತಿಳಿಯದಾಗಿದೆ. ಪ್ರಧಾನ ಮಂತ್ರಿಗಳಿಗೆ ಹೀಗೆ ಮಾತನಾಡುವುದು ಎಷ್ಟು ಸರಿಯಾದುದು. ಅವರಿಗೆ ಹೀಗೆಕೆ ಮಾತನಾಡಿದರೋ ತಿಳಿಯದು ಎಂದರು.
ಕಾಂಗ್ರೆಸ್ಸಿನವರು ಹಿಂದಿನ ಅಧಿಕಾರದ ಅಮಲಿನಲ್ಲಿನೇ ಇದ್ದಾರೆ. ಅದೇ ಅಮಲಿನಲ್ಲಿ ಹೀಗೆಲ್ಲ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡಿನೇ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಕನ್ನಡ ನಾಡು ಸುಸಂಕೃತ ನಾಡು ನಾವು ಎಲ್ಲರಿಗೂ ಗೌರವ ಕೊಡುವ ಕೆಲಸದೊಂದಿಗೆ ಗೌರವವನ್ನು ಪಡೆಯುವ ಕೆಲಸವಾಗಬೇಕು ಎಂದರು.
ಕಾಂಗ್ರೆಸ್ನವರು ಹಣ ಬಲ, ತೋಳ್ಬಲದಿಂದ ಚುನಾವಣೆ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿದೆ. ಹಿಂದಿನ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಪಟ್ಟು ಗಾಯಗಳಾಗಿವೆ. ಅವರ ಪುಂಡಾಟಿಕೆಯಿoದ ನಮ್ಮ ಮತ್ತು ನಮ್ಮ ಮತದಾರ ರಕ್ಷಣೆಗೆ ಒಂದು ರಾಜಕೀಯ ಪಕ್ಷವಾಗಿ ತನ್ನ ಕೆಲಸವನ್ನು ಮಾಡುತ್ತಿದೆ. ಚುನಾವಣಾ ಆಯೋ ತನ್ನ ಕೆಲಸವನ್ನು ಅದು ಮಾಡುತ್ತದೆ. ಒಂದು ರಾಜಕೀಯ ಪಕ್ಷವಾಗಿ ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ಏನು ತಪ್ಪು ಕಂಡುಬoದಿತೋ ಗೊತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಅವರು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅರೆ ಸೇನಾಪಡೆ ಮತ್ತು ಸೇನಾಪಡೆಯನ್ನು ನೀಯೋಜಿಸವಂತೆ ಚುನಾವಣಾ ಆಯೋಗಕ್ಕೆ ತಿಳಿಸಿರುವ ಕುರಿತು ಕಾಂಗ್ರೆಸ್ ಟೀಕೆಗೆ ಪ್ರತಿಕ್ರೀಸಿದರು ಸಿಎಂ.