ಹೊಸದಿಗಂತ ಡಿಜಿಟಲ್ ಡೆಸ್ಕ್:
“ಇವರಿಗೆ ಜೇಬುಗಳಿವೆ, ಹಣ ತುಂಬಿಸಿಟ್ಟುಕೊಳ್ಳುವ ಬುದ್ಧಿ ಇಲ್ಲ” ಎಂದು ಸಿದ್ದೇಶ್ವರ ಸ್ವಾಮಿಗಳು ಮೈಸೂರಿನ ವೇದಿಕೆಯಲ್ಲಿ ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿದ್ದರು. ಈ ಮಾತು ಅತಿಶಯೋಕ್ತಿ ಅಲ್ಲ ಎಂಬುದಕ್ಕೆ ಅವರು ಗುಜರಾತ್ ಬಿಟ್ಟು ದೆಹಲಿಗೆ ಬರುವಾಗ ಮಾಡಿದ ಕಾರ್ಯ ಸಾಕ್ಷಿ. ಹನ್ನೆರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಪಡೆದ ವೇತನ-ಭತ್ಯೆ ಇತ್ಯಾದಿಗಳೆಲ್ಲ ಸೇರಿ ಸುಮಾರು 35 ಲಕ್ಷ ರುಪಾಯಿಗಳು ಅವರ ಖಾತೆಯಲ್ಲಿದ್ದವು. ಅವನ್ನೆಲ್ಲ ಅವರು ತಮ್ಮ ಮುಖ್ಯಮಂತ್ರಿ ನಿವಾಸದಲ್ಲಿ ಕೆಲಸ ಮಾಡಿದ ಸಹಾಯಕರು, ಅಡುಗೆಯವರು, ಚಾಲಕರು ಇವರೆಲ್ಲರ ಕುಟುಂಬಕ್ಕೆ ಮತ್ತವರ ಮಕ್ಕಳ ಅಭ್ಯಾಸಕ್ಕೆ ದಾನ ಮಾಡಿ ಪ್ರಧಾನಿ ನಿವಾಸಕ್ಕೆ ಬಂದರು!
(ಪ್ರಧಾನಿ ಕಚೇರಿಯ ಸಿಬ್ಬಂದಿಗಳೊಂದಿಗೆ ಆಪ್ತ ಮಾತುಕತೆ ನಡೆಸುತ್ತಿರುವ ಮೋದಿ)