ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇರಳದಲ್ಲಿ ನಾಯಿಗಳ ಹತ್ಯಾಕಾಂಡವನ್ನು ನಿಲ್ಲಿಸುವಂತೆ ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆಎಲ್ ರಾಹುಲ್ ಹಾಗೂ ಬ್ಯಾಟ್ಸ್ಮನ್ ಶಿಖರ್ ಧವನ್ ಒತ್ತಾಯಿಸಿದ್ದಾರೆ.
“ಇದು ತುಂಬಾ ಭಯಾನಕ ಪರಿಸ್ಥಿತಿ. ಕೇರಳದಲ್ಲಿ ಸಾಮೂಹಿಕವಾಗಿ ನಾಯಿಗಳನ್ನು ಕೊಲ್ಲಲಾಗುತ್ತಿದೆ. ಇಂತಹ ನಡೆಗಳಿಂದ ಹಿಂದೆ ಸರಿಯುವಂತೆ ಮತ್ತು ಈ ಕ್ರೂರ ಹತ್ಯೆಗಳನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ. ಅದಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆಎಲ್ ರಾಹುಲ್ ಕೇರಳದಲ್ಲಿ ನಾಯಿಗಳ ಹತ್ಯೆ ತಡೆಯುವಂತೆ ಒತ್ತಾಯಿಸಿ ಇನ್ಸ್ಟಾಗ್ರಾಮ್ ಫೋಸ್ಟ್ನಲ್ಲಿ ವಿನಂತಿ ಮಾಡಿಕೊಂಡಿದ್ದರು.
ರಾಹುಲ್ ಅವರು ಬೀದಿ ನಾಯಿಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ VOSD ಸಂಘಟನೆಯ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಕೇರಳದ ಬೀದಿ ನಾಯಿಗಳಿಗಾಗಿ ಧ್ವನಿ ಎತ್ತಿದ್ದಾರೆ. ಕೇರಳದಲ್ಲಿ ಮತ್ತೆ ಬೀದಿ ನಾಯಿಗಳ ಮಾರಣಹೋಮ ಶುರುವಾಗಿದೆ ಎಂದು ಈ ಪೋಸ್ಟರ್ ಹೇಳುತ್ತಿದೆ. VOSD ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆಯಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ