ಕುಂಭದ್ರೋಣ ಮಳೆಯ ನಡುವೆ ಏಕಾಂಗಿಯಾಗಿ ತೆಪ್ಪ ನಡೆಸಿದ ಲಾಲೇಟ!!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಾದ್ಯಂತ ಭರ್ಜರಿ ಮಳೆಯಾಗುತ್ತಿರುವ ನಡುವೆಯೇ ಖ್ಯಾತ ನಟ ಮೋಹನ್ ಲಾಲ್ ಹುಚ್ಚೆದ್ದು ಹರಿಯುವ ನದಿಯಲ್ಲಿ ಏಕಾಂಗಿಯಾಗಿ ತೆಪ್ಪ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ಅಸಲಿಗೆ ಈ ದೃಶ್ಯಗಳು ನಿರ್ದೇಶಕ ಪ್ರಿಯದರ್ಶನ್ ಅವರ ‘ಒಲಮುಮ್ ತೀರವುಂ’ ಸಿನಿಮಾದ ಶೂಟಿಂಗ್ ವೇಳೆ ಸೆರೆ ಹಿಡಿದವುಗಳಾಗಿವೆ. ಎಂಟಿ ವಾಸುದೇವನ್ ನಾಯರ್ ಅವರ ಕಥೆ ಹೊಂದಿರುವ ಈ ಚಿತ್ರವನ್ನು ಪಿ.ಎನ್.ಮೆನನ್ ಈ ಚಿತ್ರವು ರಿಮೇಕ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ಶಿವನ್ ಅವರ ಛಾಯಾಗ್ರಹಣ ಮತ್ತು ಸಾಬು ಸಿರಿಲ್ ಅವರ ಕಲಾ ನಿರ್ದೇಶನವಿದೆ. ಹರೀಶ್ ಪೆರಾಡಿ, ಮಾಮೂಕೋಯ ಮುಂತಾದವರು ನಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!