ರಾಜ್ಯದಲ್ಲಿ ಮಂಕಿಪಾಕ್ಸ್‌ ಪತ್ತೆ: ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

 ರಾಜ್ಯದಲ್ಲಿ ಯಾವುದೇ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವ್ಯಕ್ತಿಯ ಸ್ಯಾಂಪಲ್ಸ್‌ ಸಂಗ್ರಹಿಸಿ ಟೆಸ್ಟ್‌ಗೆ ಕಳುಸಲಾಗಿದೆ, ಟೆಸ್ಟ್‌ ರಿಪೋರ್ಟ್‌ ಬಂದ ಬಳಿಕ ಸತ್ಯ ಗೊತ್ತಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಗೆ ಶಂಕಿತ ಮಂಕಿಪಾಕ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ‘ಶಂಕಿತ ವ್ಯಕ್ತಿಯ ಸ್ಯಾಂಪಲ್ಸ್‌ ಸಂಗ್ರಹಿಸಿ ಟೆಸ್ಟ್‌ಗೆ ಕಳುಸಲಾಗಿದೆ. ಟೆಸ್ಟ್‌ ರಿಪೋರ್ಟ್‌ ಬಂದ ಬಳಿಕ ಸತ್ಯ ಗೊತ್ತಾಗುತ್ತೆ ಎಂದರು.
ಮಂಕಿಪಾಕ್ಸ್‌ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಕಾಯಿಲೆಗೆ ಚಿಕಿತ್ಸೆಯಿದೆ, ಇದರಿಂದ ಸಾವು ಸಂಭವಿಸೋಲ್ಲ. ಇನ್ನೀದು ಮಾರಣಾಂತಿಕ ಸೋಂಕಲ್ಲ. ಆದ್ರೂ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ಇರಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!