ಮೊರ್ಬಿ ಸೇತುವೆ ಕುಸಿತ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸಲ್ಲ ಎಂದ ವಕೀಲರ ಸಂಘ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊರ್ಬಿ ಸೇತುವೆ ಕುಸಿತದಿಂದ ಇಡೀ ದೇಶವೇ ಬೆಚ್ಚಿಬಿದಿದ್ದು, 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಮೊರ್ಬಿ ಜಿಲ್ಲೆಯ ವಕೀಲರ ಸಂಘದುರಂತಕ್ಕೆ ಸಂಬಂಧ ಪಟ್ಟ ಆರೋಪಿಗಳಿಗೆ ಯಾವುದೇ ಸಹಾಯ ಮಾಡಬಾರದು ಎಂದು ತನ್ನ ಸದಸ್ಯರಿಗೆ ಸೂಚಿಸಿದೆ.

ಮೊರ್ಬಿಯ ವಕೀಲರ ಸಂಘ ತಮ್ಮ ನಿರ್ಣಯ ಪತ್ರದಲ್ಲಿ ‘ಸಂಘದ ಎಲ್ಲಾ ವಕೀಲರು ಸೇತುವೆ ಕುಸಿದ ಘಟನೆಯಿಂದ ದುಃಖಕ್ಕೆ ಒಳಗಾಗಿದ್ದಾರೆ. ಮೊರ್ಬಿ ಬಾರ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಯಾವುದೇ ವಕೀಲರು ಘಟನೆಯ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ’ ಎಂದು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!