ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಶಾರುಖ್ ನಡೆ ಬಗ್ಗೆ ಹೆಚ್ಚಿದೆ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ಇಡೀ ದೇಶವೇ ಮರುಗಿದೆ.
ನಿನ್ನೆ ನಡೆದ ಅಂತ್ಯಕ್ರಿಯೆಯಲ್ಲಿ ಬಾಲಿವುಡ್‌ನ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ, ಶಾರುಖ್ ಖಾನ್, ಆಮಿರ್ ಖಾನ್, ಸಚಿನ್ ತೆಂಡೂಲ್ಕರ್, ರಣ್‌ಬೀರ್ ಕಪೂರ್ ಸೇರಿದಂತೆ ನೂರಾರು ಗಣ್ಯರು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು.
ಈ ವೇಳೆ ಕಡೆಯ ಬಾರಿ ಶಾರುಖ್ ಖಾನ್ ನಮನ ಸಲ್ಲಿಸುವಾಗ ಲತಾ ಅವರ ಮೃತದೇಹಕ್ಕೆ ಉಗಿದರು ಎನ್ನುವ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಲತಾ ಅವರು ಮೃತದೇಹದ ಎದುರಿನಲ್ಲಿ ಶಾರುಖ್ ನಿಂತಿದ್ದಾಗ ಮಾಸ್ಕ್ ಧರಿಸಿದ್ದರು. ನಂತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ( ದುವಾ) ಸಲ್ಲಿಸಿದ್ದರು. ನಂತರ ಮಾಸ್ಕ್ ತೆಗೆದು ಗಾಳಿ ಊದಿದರು.

ಹರಿಯಾಣದ ಬಿಜೆಪಿ ಮುಖಂಡ ಅರುಣ್ ಯಾದವ್ ಈ ವಿಡಿಯೋ ಟ್ವೀಟ್ ಮಾಡಿದ್ದು, ಇವರು ಲತಾ ಅವರ ಮೃತದೇಹದ ಮೇಲೆ ಉಗುಳಿದ್ದಾ? ಎನ್ನುವ ಕ್ಯಾಪ್ಷನ್ ಹಾಕಿ ವಿಡಿಯೋಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೂಡ ವೈರಲ್ ಆಗಿದ್ದು, ಶಾರುಖ್ ನಡೆ ಪರ-ವಿರೋಧ ಚರ್ಚೆಯಾಗುತ್ತಿದೆ.

ಈ ಬಗ್ಗೆ ಕೆಲವರು ಟ್ವೀಟ್ ಮಾಡಿದ್ದು, ಮುಸ್ಲಿಂ ಸಂಪ್ರದಾಯದಲ್ಲಿ ಈ ರೀತಿ ಗಾಳಿ ಊದಲಾಗುತ್ತದೆ ಎಂದು ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!