ಮಗ ಕೊಲೆಗಾರ: ಅವಮಾನ ತಾಳದೆ ತಾಯಿ ಆತ್ಮಹತ್ಯೆ, ಪತ್ನಿ ಸಾವಿನ ಸುದ್ದಿ ಕೇಳಿ ಪತಿಗೆ ಹೃದಯಾಘಾತ!

ಹೊಸದಿಗಂತ ವರದಿ ಮೈಸೂರು:

ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯ ತಾಯಿ ಅವಮಾನ ತಾಳದೆ ಆತ್ಮಹತ್ಯೆ ಮಾಡಿಕೊಂಡರೆ, ಜೈಲಿನಲ್ಲಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಮೈಸೂರಿನ ವಿದ್ಯಾನಗರದಲ್ಲಿ ಬಾಲರಾಜ್ ಗೆ ಆತನ ನಾಲ್ವರು ಸ್ನೇಹಿತರು ಕ್ಷುಲ್ಲಕ ಕಾರಣದಿಂದ ನಡೆದ ಜಗಳದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್, ಸಂಜಯ್, ಕಿರಣ್, ಸಾಮ್ರಾಟ್ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿತ್ತು.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ತೇಜಸ್ ತಾಯಿ ಇಂದ್ರಾಣಿ ಆಘಾತ, ಅವಮಾನದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ(35) ಮಾಡಿಕೊಂಡಿದ್ದಾರೆ. ಇಂದ್ರಾಣಿ ಪತಿ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಲರಾಜ್ ಕೊಲೆ ಪ್ರಕರಣದಲ್ಲಿ ಸಾಮ್ರಾಟ್ ಸಹ ಆರೋಪಿಯಾಗಿದ್ದರು. ಸಾಮ್ರಾಟ್ ಮತ್ತೊಬ್ಬ ಆರೋಪಿ ತೇಜಸ್ ತಂದೆ ಆಗಿದ್ದಾರೆ. ಸಾಮ್ರಾಟ್‌ಗೆ ಜೈಲಿನಲ್ಲಿ ಹೃದಯಾಘಾತ ಸಾವನ್ನಪ್ಪಿದ್ದಾರೆ. ನಜರಬಾದ್ ಹಾಗೂ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!