ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾ ಅದ್ಧೂರಿ ಎಂಟ್ರಿ ಪಡೆದಿದೆ. ರಜನಿ ಫ್ಯಾನ್ಸ್ ಸಿನಿಮಾ ನೋಡಿ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ರಿಲೀಸ್ಗೂ ಮುನ್ನ ರಜನಿ ಸಾಕಷ್ಟು ರೀತಿ ಪ್ರಮೋಟ್ ಕೂಡ ಮಾಡಿದ್ದರು. ಉತ್ತರ ಪ್ರದೇಶಕ್ಕೆ ರಜನಿ ಭೇಟಿ ನೀಡಿದ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಈ ವಿಷಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಅವರಿಗಿಂತ ಸಣ್ಣ ವಯಸ್ಸಿನವರಿಗೆ ರಜನಿ ಕಾಲಿಗೆ ಬಿದ್ದಿದ್ಯಾಕೆ ಎನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೆ ರಜನಿ ಸ್ಪಷ್ಟನೆ ನೀಡಿದ್ದು, ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು ಆದರೆ ಅವರೊಬ್ಬ ಯೋಗಿ ಎನ್ನುವುದನ್ನು ಮರೆಯುವಂತಿಲ್ಲ. ಸಾಧು ಸಂತರ ಮೇಲೆ ನನಗೆ ಅಪಾರ ನಂಬಿಕೆ ಇದೆ, ಅವರು ಎಲ್ಲಿ ಕಂಡರೂ ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ. ಚಿಕ್ಕವರಾದರೇನಾಯ್ತು ಎಂದು ಸ್ಪಷ್ಟನೆ ನೀಡಿದ್ದಾರೆ.