ಕಾಲುವೆಗೆ ಜಿಗಿದ ತಾಯಿ: ಮುಂದುವರೆದ ಹುಡುಕಾಟ

ಹೊಸದಿಗಂತ ವರದಿ, ಬಳ್ಳಾರಿ:

ಮಗುವನ್ನು ಬಿಟ್ಟು ತಾಯಿ ಕಾಲುವೆಗೆ ಹಾರಿದ ಘಟನೆ ಕುರಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ ಬಳಿಯ ತುಂಗಭದ್ರ ಕಾಲುವೆ ಬಳಿ ನಡೆದಿದೆ.
ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಸರಸ್ವತಿ ಎಂದು ಗುರುತಿಸಲಾಗಿದೆ.
ಕಾಲುವೆ ಬಳಿ ಮಗು ಇರುವುದನ್ನು ಗಮನಿಸಿದ ಸ್ಥಳೀಯರು, ಅಮ್ಮ ಎಲ್ಲಿ ಎಂದು ಪ್ರಶ್ನಿಸಿದ್ದಾರೆ,‌ ಮಗು ಕಾಲುವೆ ಕಡೆ ಕೈ ಮಾಡಿ ತೋರಿಸಿದೆ. ಹಾಗಾಗಿ ತಾಯಿ ಮಗು ‌ಬಿಟ್ಟು ಕಾಲುವೆಗೆ‌ ಜಿಗಿದಿರಬಹುದು ಎಂದು ಶಂಕಿಸಲಾಗಿದೆ.
ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಅಜ್ಜ, ಅಜ್ಜಿ ಠಾಣೆಗೆ ಆಗಮಿಸಿ ಠಾಣೆಯಲ್ಲಿದ್ದ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮಗಳು ಸರಸ್ವತಿ‌ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಾಗಿದ್ದು, ಹುಡುಕಾಟ ‌ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!