ತಿರುಪತಿಯಲ್ಲಿ ಭಯೋತ್ಪಾದಕರ ಚಲನವಲನ? ಅನುಮಾನಕ್ಕೆ ಕಾರಣವಾಯ್ತು ಇ-ಮೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂದ್ರಪ್ರದೇಶದ ತಿರುಪತಿಯ ತಿರುಮಲದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಇ-ಮೇಲ್ ಬಂದಿದೆ.

ದುಷ್ಕರ್ಮಿಗಳು ದೇವಸ್ಥಾನಕ್ಕೆ ಟಿಟಿಡಿ ಮೇಲ್ ಕಳುಹಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಭಾರೀ ತಪಾಸಣೆ ನಡೆಸಿದ್ದು, ಅದು ನಕಲಿ ಮೇಲ್ ಎನ್ನುವ ಮಾಹಿತಿ ಹೊರಬಿದ್ದಿದೆ.

ಭಯೋತ್ಪಾದನಾ ಮೇಲ್‌ನಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆದರಿ ವಾಪಾಸಾಗುವ ಆಲೋಚನೆ ಮಾಡಿದ್ದರು. ಈ ಬಗ್ಗೆ ಎಸ್‌ಪಿ ಪರಮೇಶ್ವರ್ ಮಾತನಾಡಿ, ಸುಳ್ಳಿನ ಮೇಲ್ ವಿಷಯ ನಂಬಬೇಡಿ, ನಕಲಿ ಅಂಚೆಗಳಿಂದ ಭಕ್ತರು ಭಯಪಡಬೇಕಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!