ಅಕ್ರಮ ಕಸಾಯಿಖಾನೆ ನೆಲಸಮ ಮಾಡಿದ ಮಹಾನಗರ ಪಾಲಿಕೆ

ಹೊಸದಿಗಂತ ವರದಿ, ಶಿವಮೊಗ್ಗ:

ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಅಕ್ರಮ ಕಸಾಯಿಖಾನೆ ವಿರುದ್ಧ ಘರ್ಜನೆ ಮೊಳಗಿಸಿದೆ. ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಯನ್ನು ಜೆಸಿಬಿ ಯಂತ್ರ ಬಳಸಿ ನೆಲಸಮ ಮಾಡಲಾಗಿದೆ.
ಬೆಳಿಗ್ಗೆ 09 ಗೋವು ರಕ್ಷಣೆ 
ನಗರದ ಹೊರವಲಯದ ಸೂಳೆಬೈಲ್‌ನಲ್ಲಿ ಅಬ್ದುಲ್ ಅಜೀಜ್ ಎಂಬಾತ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಸಾಯಿಖಾನೆ ಮೇಲೆ ತುಂಗಾನಗರ ಠಾಣೆ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದರು. ಈ ವೇಳೆ 9 ಗೋವುಗಳನ್ನು ರಕ್ಷಿಸಲಾಗಿತ್ತು. ಅದೇ ವೇಳೆ ಗೋಮಾಂಸಕ್ಕಾಗಿ ಏಳು ಹಸುಗಳನ್ನು ಕುತ್ತಿಗೆ ಸೀಳಿ ವಧೆ ಮಾಡಿದ್ದು ಕಂಡುಬಂದಿತ್ತು. ಗೋವುಗಳ ಕಾಲು ಕಟ್ಟಿ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಹಸುಗಳು ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿತ್ತು.
ಸೂಳೆಬೈಲಿನ ಅಬ್ದುಲ್ ಅಜೀಜ್ ಎಂಬಾತ ತನ್ನ ಮನೆಯ ಹಿಂದೆ ಶೆಡ್ ನಿರ್ಮಿಸಿದ್ದ. ಗೋ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ.  ಗುಪ್ತಚರ ಇಲಾಖೆ ಮಾಹಿತಿ ಹಿನ್ನಲೆಯಲ್ಲಿ ತುಂಗಾನಗರ ಇನ್‌ಸ್ಪೆಕ್ಟರ್ ಬಿ.ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸುತ್ತಲೇ  ಕಸಾಯಿಖಾನೆ ಮಾಲೀಕ ಅಜೀಜ್ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!