ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ವಿರೋಧಿಸಿ ಹೆಸರಾಂತ ಪತ್ರಕರ್ತ ಪಿ. ಸಾಯಿನಾಥ್ ಅವರು 2017ರಲ್ಲಿ ಮುರುಘಾ ಮಠದಿಂದ ಕೊಡಲ್ಪಟ್ಟಿದ್ದ ಬಸವಶ್ರೀ ಪ್ರಶಸ್ತಿಯನ್ನು ಜೊತೆಗೆ 5 ಲಕ್ಷ ರೂ. ನಗದು ಬಹುಮಾನವನ್ನು ಹಿಂತಿರುಗಿಸಿದ್ದಾರೆ.
ಶ್ರೀ ಮುರುಘಾಮಠದ ಮಠಾಧೀಶರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮ ವರದಿಗಳಿಂದ ನನಗೆ ತಿಳಿಯಿತು. ಇದರಿಂದ ನಾನು ಹೆಚ್ಚು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ನನಗೆ ಕಠಿಣ ಪದಗಳು ಸಿಗುತ್ತಿಲ್ಲ . 2017ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು (ಮತ್ತು ಅದರೊಂದಿಗೆ ಬಂದಿರುವ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ) ನಾನು ಈ ಮೂಲಕ ಬದುಕುಳಿದವರಿಗೆ ಮತ್ತು ಈ ಪ್ರಕರಣದಲ್ಲಿ ನ್ಯಾಯದ ಕಾರಣಕ್ಕಾಗಿ ಹಿಂದಿರುಗಿಸುತ್ತೇನೆ. ಈ ರೀತಿಯ ಘೋರ ಘಟನೆಗಳನ್ನು ಬೆಳಕಿಗೆ ತರಲು ಮೈಸೂರು ಮೂಲದ ಎನ್ಜಿಒ ಒಡನಾಡಿಯ ಪ್ರಯತ್ನಗಳು ಮತ್ತು ಇಂತಹ ಸಾಮಾಜಿಕ ಅನಿಷ್ಟತೆಗಳ ವಿರುದ್ಧ ದಶಕಗಳ ಹೋರಾಟದ ಬಗ್ಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ಜೊತೆಗೆ ಹಗರಣದ ತನಿಖೆಯನ್ನು ತೀವ್ರವಾಗಿ ಮುಂದುವರಿಬೇಕು. ಮತ್ತು ಯಾವುದೇ ರೀತಿಯಲ್ಲೂ ಪ್ರಕರಣದ ಬಗ್ಗೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಪಿ ಸಾಯಿನಾಥ್ ಬರೆದುಕೊಂಡಿದ್ದಾರೆ.
1/5. I am most disturbed to learn from media reports of the appalling developments involving the pontiff of the Shri Murughamath in Chitradurga, Shri Shivamurthy Murugha Sharanaru. He now faces a case and charges under the POCSO and SC/ST act.#MurughaMutt
— P. Sainath (@PSainath_org) September 2, 2022