ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಚತುರ್ಥಿಯ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಗಣೇಶನ ಮೂರ್ತಿಯಿಟ್ಟು ಪೂಜಿಸಿದ್ಕಕ್ಕೆ ಇಸ್ಲಾಂ ಗೂಂಡಾಗಳು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮೀರತ್ನ ಬಿಜೆಪಿ ನಾಯಕಿ ರೂಬಿ ಖಾನ್ ಹೇಳಿದ್ದಾರೆ.
ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮುಸ್ಲಿಂ ಧರ್ಮಗುರುಗಳಿಂದ ಬೆದರಿಕೆ ಇದೆ. ಈ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯಲ್ಲಿ ಪೂಜೆ ಸಲ್ಲಿಸಿದಾಗ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ರೂಬಿ ಖಾನ್ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ವರದಿಯಲ್ಲಿ ರೂಬಿ ಖಾನ್ “ನಾನು 7 ದಿನಗಳ ಕಾಲ ನನ್ನ ಮನೆಯಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದೇನೆ ಮತ್ತು ಅದನ್ನು ಶ್ರದ್ಧೆಯಿಂದ ನಿಮಜ್ಜನ ಮಾಡುತ್ತೇನೆ. ರಾಮ ಮಂದಿರದ ಅಡಿಪಾಯ ಹಾಕಿದ ನಂತರವೂ ನಾನು ನನ್ನ ಮನೆಯಲ್ಲಿ ಪೂಜೆ ಮಾಡಿದ್ದೇನೆ, ನಂತರ ನನ್ನ ವಿರುದ್ಧ ಫತ್ವಾ ಹೊರಡಿಸಲಾಯಿತು. ಅವರೆಲ್ಲರೂ ನನ್ನ ವಿರುದ್ಧ ನಿಂತಿದ್ದಾರೆ, ಈಗ, ಈ ಜನರು ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ, ನನಗೆ ಬೆದರಿಕೆಗಳು ಬರುತ್ತಿವೆ, ನಾನು ಹೆದರುವವನಲ್ಲ, ನಾನು ಗಣೇಶನನ್ನು ಮುಳುಗಿಸುತ್ತೇನೆ, ನನ್ನ ಪತಿ ನನ್ನೊಂದಿಗೆ ಇದ್ದಾರೆ” ಎಂದು ಹೇಳಿದ್ದಾರೆ.
ಈ ಹಿಂದೆಯೂ ತನ್ನನ್ನು ಟಾರ್ಗೆಟ್ ಮಾಡಲಾಗಿತ್ತು , ಆದರೂ ಹೆದರದೆ ಪತಿಯೊಂದಿಗೆ ಗಣೇಶ ಮೂರ್ತಿಯನ್ನು ಸಕಲ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಗಿದೆ ಎಂದು ರೂಬಿ ಖಾನ್ ಹೇಳಿದ್ದಾರೆ.