ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಬಿರುಬಿಸಿಲಿಗೆ ರಾಜ್ಯದ ಜನತೆ ಹೈರಾಣಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಇನ್ನೂ ನಾಲ್ಕು ತಿಂಗಳು ರಾಜ್ಯದಲ್ಲಿ ರಣಬಿಸಿಲು ಇರಲಿದೆ.
ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಬಿಸಿಲು ಇರಲಿದೆ. ಬೆಳಗ್ಗೆ 10 ಗಂಟೆ ನಂತರ ಮೈ ಕೈ ಚುಚ್ಚುವಂಥ ಚುರುಕು ಬಿಸಿಲು ಇರಲಿದೆ ಎನ್ನಲಾಗಿದೆ.
ಎಂದಿಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ವಾತಾವರಣದಲ್ಲಿ ತೇವಾಂಶ ಕೂಡ ಕಡಿಮೆ ಇರಲಿದೆ. ಬೆಳಗಿನ ಜಾವ ಮಂಜಿನ ವಾತಾವರಣ ಇದ್ದರೂ 9-10 ೦ಗಂಟೆ ನಂತರ ರಣಬಿಸಿಲು ಕಾಡಲಿದೆ.
ಬಿಸಿಲಿನಿಂದ ರಕ್ಷಣೆಗೆ ಈ ಕ್ರಮಗಳನ್ನು ಕೈಗೊಳ್ಳಿ
- ಸದಾ ನೀರು ಕುಡಿಯಿರಿ, ದೇಹ ಹೈಡ್ರೇಟ್ ಆಗಿರಲಿ
- ಸನ್ಸ್ಕ್ರೀನ್ ಮರೆಯುವ ಮಾತೇ ಇಲ್ಲ
- ಆರೋಗ್ಯಕರ ಆಹಾರಕ್ಕೆ ಬದಲಾವಣೆ ಮಾಡಿಕೊಳ್ಳಿ.
- ಕಾಫಿ ಸೇವನೆ ಬದಲು, ಎಳನೀರನ್ನು ಕುಡಿಯಿರಿ
- ಕಾಟನ್ ಬಟ್ಟೆಗಳೇ ಸ್ನೇಹಿತ
- ಅವಶ್ಯಕತೆ ಇಲ್ಲವಾದರೆ ಸುಮ್ಮನೆ ಹೊರಗೆ ಹೋಗಬೇಡಿ