ಇನ್ನೂ ನಾಲ್ಕು ತಿಂಗಳು ರಾಜ್ಯದಲ್ಲಿರಲಿದೆ ಮೈ ಚುಚ್ಚುವ ರಣಬಿಸಿಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ಬಿರುಬಿಸಿಲಿಗೆ ರಾಜ್ಯದ ಜನತೆ ಹೈರಾಣಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಇನ್ನೂ ನಾಲ್ಕು ತಿಂಗಳು ರಾಜ್ಯದಲ್ಲಿ ರಣಬಿಸಿಲು ಇರಲಿದೆ.

ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಬಿಸಿಲು ಇರಲಿದೆ. ಬೆಳಗ್ಗೆ 10  ಗಂಟೆ ನಂತರ ಮೈ ಕೈ ಚುಚ್ಚುವಂಥ ಚುರುಕು ಬಿಸಿಲು ಇರಲಿದೆ ಎನ್ನಲಾಗಿದೆ.

ಎಂದಿಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ವಾತಾವರಣದಲ್ಲಿ ತೇವಾಂಶ ಕೂಡ ಕಡಿಮೆ ಇರಲಿದೆ. ಬೆಳಗಿನ ಜಾವ ಮಂಜಿನ ವಾತಾವರಣ ಇದ್ದರೂ 9-10 ೦ಗಂಟೆ ನಂತರ ರಣಬಿಸಿಲು ಕಾಡಲಿದೆ.

ಬಿಸಿಲಿನಿಂದ ರಕ್ಷಣೆಗೆ ಈ ಕ್ರಮಗಳನ್ನು ಕೈಗೊಳ್ಳಿ

  • ಸದಾ ನೀರು ಕುಡಿಯಿರಿ, ದೇಹ ಹೈಡ್ರೇಟ್ ಆಗಿರಲಿ
  • ಸನ್‌ಸ್ಕ್ರೀನ್ ಮರೆಯುವ ಮಾತೇ ಇಲ್ಲ
  • ಆರೋಗ್ಯಕರ ಆಹಾರಕ್ಕೆ ಬದಲಾವಣೆ ಮಾಡಿಕೊಳ್ಳಿ.
  • ಕಾಫಿ ಸೇವನೆ ಬದಲು, ಎಳನೀರನ್ನು ಕುಡಿಯಿರಿ
  • ಕಾಟನ್ ಬಟ್ಟೆಗಳೇ ಸ್ನೇಹಿತ
  • ಅವಶ್ಯಕತೆ ಇಲ್ಲವಾದರೆ ಸುಮ್ಮನೆ ಹೊರಗೆ ಹೋಗಬೇಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!