ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ನಾಟಕವನ್ನು ತಿರುಚಿ ಪ್ರದರ್ಶಿಸಲಾಗಿದೆ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಸಾಂಬಶಿವ ಪ್ರಹಸನ ನಾಟಕವನ್ನು ರಂಗಾಯಣದಲ್ಲಿ ಅಸಹ್ಯಕರವಾಗಿ ತಿರುಚಿ ಪ್ರದರ್ಶನ ನೀಡಿದ್ದಾರೆ. ಇದರಿಂದ ನನಗೆ ನೋವಾಗಿದೆ. ಮೊದಲು ನನ್ನ ಅನುಮತಿ ಕೇಳಬೇಕಿತ್ತು. ಆದರೆ ಅವರು ಯಾವುದೇ ಅನುಮತಿ ಪಡೆಯದೇ ನಾಟಕ ಪ್ರದರ್ಶಿಸಿದ್ದಾರೆ. ನನ್ನ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದಿಲ್ಲ. ಅನುಮತಿ ಇಲ್ಲದೆ ನಾಟಕ ಪ್ರದರ್ಶಿಸಿದವರ ಮೇಲೆ, ಪ್ರದರ್ಶನಕ್ಕೆ ಅವಕಾಶ ಕೊಟ್ಟವರ ಮೇಲೆ, ಇಲ್ಲದ ಸಾಹಿತ್ಯವನ್ನು ನಾಟಕಕ್ಕೆ ಸೇರಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ.