ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ಒಂದು ವರ್ಷ. ಅವರ ನೆನಪಲ್ಲೇ ಅಭಿಮಾನಿಗಳು ನಿತ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ಸಾಮಾನ್ಯರಿಂದ ಗಣ್ಯರವರೆಗೂ ಅಪ್ಪು ನೆನೆದು ಕಂಬನಿ ಮಿಡಿಯುತ್ತಲೇ ಇದ್ದಾರೆ, ಅಪ್ಪುಗೆ ನಮಿಸುತ್ತಲೇ ಇದ್ದಾರೆ.
ಇದೀಗ ದೆಹಲಿ ಸಿಎಂ ಕೂಡ ಅಪ್ಪುವನ್ನು ಸ್ಮರಿಸಿದ್ದಾರೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ.
I profoundly remember the Icon – Dr Puneeth Rajkumar on his death anniversary.
His movies, songs, kindness & social works make us feel he never left us. He will always be a power star of #Karunadu #AppuLivesOn #DrPunithRajkumar
— Arvind Kejriwal (@ArvindKejriwal) October 29, 2022
ಕನ್ನಡದಲ್ಲೇ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ’ ಎಂದಿದ್ದಾರೆ. ‘ಇಂದು ಡಾ.ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿ. ಅವರ ನೆನಪು ನನ್ನನ್ನು ಗಾಢವಾಗಿ ಕಾಡುತ್ತಿದೆ. ಪುನೀತ್ ಅವರ ಸಿನಿಮಾ, ಹಾಡು, ದಯೆ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿದರೆ ಅವರು ನಮ್ಮನ್ನು ಎಂದಿಗೂ ತೊರೆದಿಲ್ಲ. ಅವರು ನಮ್ಮೊಂದಿಗೇ ಇದ್ದಾರೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್’ ಎಂದು ಬರೆದುಕೊಂಡಿದ್ದಾರೆ