Mythology | ದ್ರುಪದ ಪುತ್ರಿ ದ್ರೌಪದಿ ಯಾರು? ಆಕೆ ಪಂಚಪಾಂಡವರನ್ನು ವರಿಸಿದ್ದು ಯಾಕೆ?

ಹಿಂದು ಧರ್ಮದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಮಹಾಭಾರತವೂ ಒಂದು. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಗೆ ಹಿಂದಿನ ಜನ್ಮದ ನಂಟಿದೆ. ಇಂತಹ ಮಹಾಭಾರತದ ಕೆಲವು ಪಾತ್ರಗಳು ಇಂದಿಗೂ ನಿಗೂಢ. ಅಂತಹ ಪಾತ್ರಗಳಲ್ಲಿ ಒಂದು ದ್ರೌಪದಿಯ ಪಾತ್ರ.

ದ್ರೌಪದಿ ಪಾಂಚಾಲ ರಾಜ ದ್ರುಪದನ ಮಗಳು. ಪುರಾಣ ಹಾಗೂ ಇತಿಹಾಸದಲ್ಲಿಅತಿ ಶ್ರೇಷ್ಠವಾದ ಮಹಿಳೆಯರೆಂದುಹೇಳುವಂತಹ ಐವರಲ್ಲಿ ದ್ರೌಪದಿಯು ಸಹ ಒಬ್ಬಳು. ಮಹಾಭಾರತದಲ್ಲಿ ದ್ರೌಪದಿ ಇಲ್ಲದೇ ಇದ್ದರೆ ಕುರುಕ್ಷೇತ್ರ ಯುದ್ಧವೇ ನಡೆಯುತ್ತಿರಲಿಲ್ಲ. ಕುರುಕ್ಷೇತ್ರ ಯುದ್ಧಕ್ಕೆ ಧರ್ಮ ಸಂಸ್ಥಾಪನೆಗೆ ಮೂಲಕಾರಣವೇ ದ್ರೌಪದಿ ಎಂದು ಹೇಳಲಾಗುತ್ತದೆ. ಹೀಗಾಗಿ ದ್ರೌಪದಿಯ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಮಾಹಿತಿಗಳು ಇವೆ. ದ್ರೌಪದಿ ಯಾರು? ಅವಳ ಹಿಂದಿನ ಜನ್ಮ ರಹಸ್ಯವೇನು ಎಂದು ತಿಳಿದುಕೊಳ್ಳೋಣ.

ಪೂರ್ವಕಾಲದಲ್ಲಿ ಮೌದ್ಗಲ್ಯ ಎನ್ನುವ ಮಹಾಮುನಿ ಒಬ್ಬರಿದ್ದರೂ. ಅವರ ಶರೀರವೆಲ್ಲಾ ಕುಷ್ಠರೋಗದಿಂದ ತುಂಬಿತ್ತು.ನೋಡಲು ಅತೀ ಕುರೂಪಿಯಾಗಿದ್ದರು ಅವರ ದೇಹವೆಲ್ಲಾ ಹುಣ್ಣುಗಳಿಂದ ತುಂಬಿ ರಕ್ತ ಕೀವು ಸುರಿಯುತ್ತಿತ್ತು. ಅಂತಹ ಮೌದ್ಗಲ್ಯನ ಮಡದಿಯೇ ಇಂದ್ರಸೇನಾ. ಅವಳು ಅತ್ಯಂತ ರೂಪವತಿ ಅದು ಮಾತ್ರವಲ್ಲದೆ ಮಹಾನ್ ಪತಿವ್ರತೆಯು ಕೂಡ. ಗಂಡ ಹೇಗಾದರೂ ಇರಲಿ ಅವನಿಗೆ ಸೇವೆ ಮಾಡುವುದೊಂದೆ ಕೆಲಸ ಎಂಬಂತೆ ಅವನಿಗೆ ಹಗಲು ರಾತ್ರಿ ಸೇವೆಗಳನ್ನು ಮಾಡುತ್ತಾ ಅದರಲ್ಲಿಯೇ ಮುಳುಗಿ ಹೋಗಿದ್ದಳು.

ಒಂದು ದಿನ ಮೌದ್ಗಲ್ಯ ತಿಂದಂತಹ ತಟ್ಟೆಯಲ್ಲಿ ಇಂದ್ರಸೇನಾ ಊಟ ತಿನ್ನುತ್ತಿರುವಾಗ ಆ ಊಟದಲ್ಲಿ ಮೌದ್ಗಲ್ಯನ ಕೈ ಬೆರಳೊಂದು ಸಿಗುತ್ತದೆ.ಅದನ್ನು ನೋಡಿದರೆ ಯಾರಾದರೂ ಅಸಹ್ಯ ಪಡುತ್ತಾರೆ ಆದರೆ ಇಂದ್ರಸೇನಾ ಮಾತ್ರ ಅಯ್ಯೋ ನನ್ನ ಗಂಡನ ಇನ್ನೊಂದು ಬೆರಳು ಸಹ ಉದುರಿ ಹೋಯಿತೆ ಎಂದು ದುಃಖಿಸುತ್ತಾ ಆ ಬೆರಳನ್ನು ಪಕ್ಕಕ್ಕಿಟ್ಟು ಊಟ ಸೇವಿಸಿದಳು.ಅದನ್ನೆಲ್ಲ ಪಕ್ಕದಲ್ಲೇ ಕುಳಿತು ನೋಡುತ್ತಿದ್ದ ಮೌದ್ಗಲ್ಯ ಇಂದ್ರ ಸೇನಳಿಗಿರುವ ಪತಿಭಕ್ತಿಗೆ ಮನಸೋತು “ನಿನಗೇನು ವರ ಬೇಕೊ ಬೇಡಿಕೊ ,ನನಗಿರುವ ತಪೋಶಕ್ತಿಯಿಂದ ಅದನ್ನು ಈಡೇರಿಸುತ್ತೇನೆ” ಎಂದರು.

ನಾನು ನಿಮ್ಮೊಂದಿಗೆ ಯಾವ ಸುಖವೂ ಅನುಭವಿಸಲು ಸಾಧ್ಯವಾಗಲಿಲ್ಲ ಹಾಗಾಗಿ ನನಗೆ ನಿಮ್ಮೊಂದಿಗೆ ಸಂತೋಷವಾಗಿ ಕೆಲ ಸಮಯ ಕಳೆಯಬೇಕೆಂಬ ಬಯಕೆ ಇದೆ ಎಂದಳು ಇಂದ್ರಸೇನಾ.

ಇಂದ್ರಸೇನಾಳ ಬಯಕೆಯನ್ನು ತಿರಸ್ಕರಿಸಲಾಗದೆ ಮೌದ್ಗಲ್ಯ ತನ್ನ ತಪೋಬಲದಿಂದ 5 ರೂಪಗಳಲ್ಲಿ 5 ಅಂಧವಾದ ಪ್ರದೇಶಗಳಲ್ಲಿ ಇಂದ್ರಸೇನಳೊಡನೆ ಶೃಂಗಾರ ನಡೆಸುತ್ತಾರೆ. ಕೆಲ ದಿನಗಳ ಬಳಿಕ ಮೌದ್ಗಲ್ಯ ಮರಣಿಸಿ ಬ್ರಹ್ಮ ಲೋಕ ಸೇರುತ್ತಾರೆ. ಇಂದ್ರಸೇನಾ ಸಹ ತನ್ನ ಗಂಡನ ಚಿತೆಯಲ್ಲಿಯೇ ದೇಹತ್ಯಾಗ ಮಾಡಿ ಮುಂದಿನ ಜನ್ಮದಲ್ಲಿ ಕಾಶಿ ರಾಜನ ಮಗಳಾಗಿ ಜನಿಸುತ್ತಾಳೆ.

ಕಾಶಿ ರಾಜನ ಮಗಳಾಗಿ ಹುಟ್ಟಿದ ಇಂದ್ರಸೇನಾ ಗಂಗಾ ನದಿ ದಡದಲ್ಲಿ ಕುಳಿತು ಶಿವನಿಗಾಗಿ ತಪಸ್ಸು ಮಾಡುತ್ತಾಳೆ. ಶಿವ ಪ್ರತ್ಯಕ್ಷಗೊಂಡು “ಏನು ವರ ಬೇಕೆಂದು?” ಕೇಳಿದರೆ ಆ ಕಾಶಿ ರಾಜನಕುಮಾರಿಯ ಶಿವನನ್ನು ನೋಡಿ ಅಯೋಮಯದಲ್ಲಿ ಏನು ಕೇಳುವುದೆಂದು ತೋಚದೆ ಅವಸರದಲ್ಲಿ ಬಾಯಿ ತೊದಲುತ್ತಾ ಪತಿ ಪತಿ ಎಂದು 5 ಬಾರಿ ಹೇಳುತ್ತಾಳೆ. ಒಡನೆಯೇ ಶಿವ ಅವಳಿಗೆ ಐವರು ಪುರುಷರೊಂದಿಗೆ ವಿವಾಹವಾಗುತ್ತದೆ ಎಂದು ವರ ಪ್ರಸಾದಿಸುತ್ತಾರೆ.

ವಿಧಿಯಿಲ್ಲದೆ ಕಾಶಿ ರಾಜನ ಮಗಳು ಧನ್ಯೋಸ್ಮಿ ಎನ್ನುತ್ತಾ ನನಗೆ ಎಂತಹ ಗುಣಗಳೇ ಮಹಾ ಗುಣಗಳಿರುವ ಪತಿಗಳು ಸಿಗುತ್ತಾರೆಂದು ಶಿವನನ್ನು ಕೇಳಿದರೆ ,”ಇಂದ್ರನನ್ನು ನನ್ನ ಬಳಿ ಕರೆತಂದರೆ ಹೇಳುತ್ತೇನೆ” ಎನ್ನುತ್ತಾರೆ ಶಿವ. ಗಂಗಾ ನದಿಯ ಬಳಿ ಇದ್ದಂತಹ ಇಂದ್ರ ದೇವರನ್ನು ಶಿವನ ಬಳಿ ಕರೆತರುತ್ತಾಳೆ ಅದೇ ಸಮಯದಲ್ಲಿ ಶಿವ ಯುವಕನಂತೆ ರೂಪಾ ಬದಲಾಯಿಸಿ ಒಂದು ಯುವತಿಯೊಡನೆ ಕವಡೆ ಆಟ ಆಡುತ್ತಿರುತ್ತಾರೆ. ಇಂದ್ರ ದೇವರಿಗೆ ಕೋಪ ಬಂದು ಆ ಯುವಕನಿಗೆ ಬಯ್ಯುತ್ತಾನೆ. ಆ ಯುವಕನ ವೇಶದಲ್ಲಿದ್ದ ಶಿವ “ನೀನಷ್ಟು ಬಲಶಾಲಿಯಾದರೆ ಅಲ್ಲಿ ಕಾಣಿಸುವಂತಹ ಗುಹೆಯನ್ನು ಒಂದೇ ಏಟಿಗೆ ಎರಡು ಭಾಗಗಳಾಗಿಸು” ಎಂದು ಒಂದು ಗುಹೆಯ ಕಡೆ ಬೆರಳು ಮಾಡಿ ತೋರಿಸುತ್ತಾರೆ.

ಶಿವನು ಹೇಳಿದಂತೆಯೇ ಇಂದ್ರ ಒಂದೇ ಏಟಿಗೆ ಗುಹೆ ಒಡೆದು ಹಾಕುತ್ತಾನೆ. ಇಂದ್ರನನ್ನು ಹೋಲುವಂತಹ ಇನ್ನು 4 ಜನ ಪುರುಷರು ಗುಹೆಯೊಳಗಿರುತ್ತಾರೆ. ಅದನ್ನು ನೋಡಿ ಇಂದ್ರ ಆಶ್ಚರ್ಯಗೊಂಡು ಹಿಂತಿರುಗಿ ಆ ಯುವಕನೆಡೆಗೆ ನೋಡಿದರೆ ಆ ಯುವಕ ಶಿವನ ರೂಪಕ್ಕೆ ಬಂದು ‘ನೀವು 5 ಜನರು ಭೂಲೋಕದಲ್ಲಿ ಜನಿಸಬೇಕು’ ಎನ್ನುತ್ತಾರೆ. ಶಿವನ ಆಜ್ಞೆಯ ಮೇರೆಗೆ ಇಂದ್ರ ದೇವರು ,ವರುಣ ದೇವರು ,ವಾಯುದೇವರು ,ಅಶ್ವಿನಿ ದೇವತೆಗಳ ಅಂಶವೂ ಪಾಂಡುರಾಜನ ಮಡದಿಯಾದ ಕುಂತಿ ದೇವಿಗೆ ಜನಿಸುತ್ತಾರೆ. ಹಾಗೆಯೇ ದ್ರುಪದನ ಕುಮಾರಿಯಂತೆ ಕಾಶಿ ರಾಜನ ಮಗಳು ಯಜ್ಞಕುಂಡದಿಂದ ಜನಿಸುತ್ತಾಳೆ ಅವಳೇ ದ್ರೌಪದಿ. ಹೀಗೆ ಜನಿಸಿದ ದ್ರೌಪತಿ ಪಂಚಪಾಂಡವರನ್ನು ವಿವಾಹವಾಗಿ ಪಾಂಚಾಲಿಯಾಗಿ ಬದಲಾಗುತ್ತಾಳೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!