ʼಕನ್ನಡ ಕನ್ನಡ ಎಂದು ಕಿರುಚುವುದರಿಂದಲೇ ಪಹಲ್ಗಾಮ್‌ ದಾಳಿಯಾಗಿದ್ದುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಂಗರ್‌ ಸೋನು ನಿಗಮ್‌ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿನ ಬಿದರಹಳ್ಳಿಯ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡ ಕನ್ನಡ ಎಂದು ಕಿರುಚಿ ಹೇಳುತ್ತೀರಿ, ಹೀಗೆ ಮಾಡೋದ್ರಿಂದಲೇ ಪಹಲ್ಗಾಮ್‌ ದಾಳಿಯಾಗಿದ್ದು ಎಂದು ಹೇಳಿದ್ದಾರೆ. ಸೋನು ಕಾರ್ಯಕ್ರಮದಲ್ಲಿ ಹಾಡು ಹೇಳುವಾಗ ಯುವಕನೊಬ್ಬ ಕನ್ನಡ ಕನ್ನಡ ಎಂದು ಜೋರಾಗಿ ಕೂಗಿದ್ದಾನೆ. ಇದರಿಂದ ಸೋನು ಮಧ್ಯದಲ್ಲೇ ಹಾಡನ್ನು ನಿಲ್ಲಿಸಿ ” ನನಗೆ ಕನ್ನಡ ಭಾಷೆ ಅಂತ್ಯಂತ ಪ್ರಿಯವಾದ್ದು, ಕನ್ನಡದಲ್ಲಿ ನಾನು ಹಾಡಿರುವ ಹಾಡುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಇದೆ. ಅಂತೆಯೇ ನೀವು ಪ್ರೀತಿ ನೀಡಿದ್ದೀರಿ. ಪ್ರತೀ ಬಾರಿ ಕರ್ನಾಟಕದಲ್ಲಿ ಇದ್ದಾಗ ನಾನು ಕನ್ನಡ ಹಾಡನ್ನು ಹಾಡಿಯೇ ಹಾಡುತ್ತೇನೆ. ಆದರೆ ನೀವು ಕೆಟ್ಟದಾಗಿ ಕಿರುಚಿದ್ದು ಇಷ್ಟವಾಗಿಲ್ಲ. ಕನ್ನಡ ಕನ್ನಡ ಎಂದು ಕಿರುಚಿ ಹೇಳುತ್ತೀರಿ, ಹೀಗೆ ಮಾಡೋದ್ರಿಂದಲೇ ಪಹಲ್ಗಾಮ್‌ ದಾಳಿಯಾಗಿದ್ದು” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!