ಸ್ಯಾಮ್‌ಗೆ ಅನಾರೋಗ್ಯ, ಚೈತು ಮೌನ: ಅಭಿಮಾನಿಗಳಲ್ಲಿ ಗೊಂದಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದಾಗಿನಿಂದ ಅವರ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಟಾಲಿವುಡ್ ನಿಂದ ಬಾಲಿವುಡ್‌ವರೆಗೆ ಎಲ್ಲರೂ  ಸ್ಯಾಮ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಟಾಲಿವುಡ್‌ನ ಹಲವು ತಾರೆಯರು ಸಮಂತಾ ಅವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಆದ್ರೆ ಅಕ್ಕಿನೇನಿ ಫ್ಯಾಮಿಲಿಯಿಂದ ಸಮಂತಾ ಬ್ರೇಕ್ ಅಪ್ ಆದ ಆ ಫ್ಯಾಮಿಲಿಯಿಂದ ಯಾರೂ ಟ್ವೀಟ್ ಮಾಡಲ್ಲ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ತಮ್ಮ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಸ್ಯಾಮ್ ಆರೋಗ್ಯವಾಗಿರಲಿ ಹಾಗೂ ಶೀಘ್ರ ಗುಣಮುಖರಾಗಲಿ ಎಂದು ಅಖಿಲ್ ಅಕ್ಕಿನೇನಿ ಟ್ವೀಟ್ ಮಾಡಿದ್ದಾರೆ. ಆದರೆ ವಿಚಾರ ತಿಳಿದ ಕೂಡಲೇ ಸ್ಯಾಮ್ ಅನಾರೋಗ್ಯದ ಬಗ್ಗೆ ನಾಗ ಚೈತನ್ಯ ಕೂಡ ಟ್ವೀಟ್ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ, ನಾಗಚೈತನ್ಯ ಮೌನ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ. ಮತ್ತು ಸ್ಯಾಮ್ ಆರೋಗ್ಯದ ಬಗ್ಗೆ ಚೈತು ಮಾತನಾಡುತ್ತಾರಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!