ದೇಶಸೇವೆಗೆ ಜೀವ ಮುಡಿಪಿಟ್ಟಿದ್ದ ನಂದಕುಮಾರ್ ತ್ರಿವೇದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಂದಕುಮಾರ್ ತ್ರಿವೇದಿಯವರು 1921 ರಲ್ಲಿ ಮೇವಾರದ ಕನೋಡ್ ಪ್ರದೇಶದ ಬದ್ವಾಯಿ ಗ್ರಾಮದ ಪಂಡಿತ್ ಪರಮಾನಂದಜಿಯವರ ಮನೆಯಲ್ಲಿ ಜನಿಸಿದರು. ಅವರು ಸತ್ನಾದಲ್ಲಿ (ಮಧ್ಯಪ್ರದೇಶ) ಶಿಕ್ಷಣ ಪಡೆದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಸಾತ್ನಾದಲ್ಲಿ ಹೋರಾಟಕ್ಕಿಳಿದರು. ಈ ವೇಳೆ ಪೊಲೀಸರು ಅವರನ್ನು ಸಾಕಷ್ಟು ಬಾರಿ ಥಳಿಸಿದರು. ಅವರು ತನ್ನ ಮಾತೃನೆಲ ಮೇವಾರಕ್ಕೆ ಬಂದ ನಂತರ, ಅವರು ತಮ್ಮ ಸಮಾಜವಾದಿ ಚಿಂತನೆಗಳ ಒಡನಾಡಿಗಳೊಂದಿಗೆ ಜವಾಬ್ದಾರಿಯುತ ಆಡಳಿತಕ್ಕಾಗಿ ಒತ್ತಾಯಿಸಿ ಹೋರಾಟ ಮಾಡಲು ಪ್ರಾರಂಭಿಸಿದರು. ಈ ಹೋರಾಟದ ವೇಳೆಯಲ್ಲೇ ಏಪ್ರಿಲ್ 4, 1946 ರಂದು ನಂದಕುಮಾರ್ ತ್ರಿವೇದಿ ಅವರ ಎರಡೂ ಕಾಲುಗಳಿಗೆ ಗುಂಡುಗಳು ತಗುಲಿದವು. ಇದರಿಂದ ಅವರ ಒಂದು ಕಾಲು ಊನವಾಯಿತು. ಅವರು ತಮ್ಮ ಜೀವಿತದ ಕೊನೆಯವಗೆ ದೇಶ ಸೇವೆಯಲ್ಲಿ ನಿರತರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!