ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ನಿತೀಶ್‌ ಕುಮಾರ್‌ ಗೆ ಎದುರಾಗಿದೆ ವಿಶ್ವಾಸ ಮತಯಾಚನೆಯ ಅಗ್ನಿಪರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಆಗಸ್ಟ್‌ 24ರಂದು ವಿಶ್ವಾಸ ಮತಯಾಚನೆಯ ಅಗ್ನಿಪರೀಕ್ಷೆ ನಡೆಯಲಿದೆ.
ಬಿಜೆಪಿಯೊಂದಿಗಿನ ಸ್ನೇಹ ಕಡಿದುಕೊಂಡಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಎನ್‌ಡಿಎಯಿಂದ ಹೊರಬಂದು ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಇತರ ಪಕ್ಷಗಳೊಂದಿಗೆ ಮಹಾಘಟಬಂಧನ ಸರ್ಕಾರ ರಚಿಸಿದ್ದಾರೆ.
ಬುಧವಾರ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರು ನೂತನ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಅದರಂತೆ ಆ. 24ಕ್ಕೆ ವಿಶ್ವಾಸಮತ ಯಾಚನೆ ನಿಗದಿಯಾಗಿದೆ. 165ಕ್ಕಿಂತಲೂ ಹೆಚ್ಚು ಸದಸ್ಯರ ಬಲ ಹೊಂದಿರುವ ಮಹಾಘಟಬಂಧನ ಸರ್ಕಾರ ಅನಾಯಾಸವಾಗಿ ಬಹುಮತ ಸಾಬೀತುಗೊಳಿಸುವುದು ನಿಚ್ಚಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!