ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮೂರ್ನಾಲ್ಕು ದಿನಗಳಿಂದ ಮಾಧ್ಯಮಗಳ ಕಣ್ಣಿಗೆ ಬಿದ್ದಿರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದಲ್ಲಿ ಮಾಧ್ಯಮ ಮಿತ್ರರ ಕಣ್ಣಿಗೆ ಬಿದ್ದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸಲಿರುವುದು ಪಕ್ಕಾ ಆಗಿದ್ದು ಅವರು ಮಂಡ್ಯವನ್ನು ತಮ್ಮ ಕರ್ಮಭೂಮಿ ಅನ್ನುತ್ತಾ ಭಾವನಾತ್ಮಕ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ.
ಅದೇ ಸಂಗತಿಯನ್ನು ಪತ್ರಕರ್ತರು ಇಂದು ಮೈಸೂರಲ್ಲಿ ಪ್ರಸ್ತಾಪಿಸಿ ಕುಮಾರಸ್ವಾಮಿ ಎದುರು ಕಾಂಗ್ರೆಸ್ ಹೊಸಮುಖವನ್ನು ಕಣಕ್ಕಿಳಿದೆಯಲ್ಲ, ಅವರು ದುರ್ಬಲ ಅಭ್ಯರ್ಥಿ ಅನಿಸುತ್ತಿಲ್ಲವೇ ಅಂದಾಗ ಕೋಪಗೊಂಡ ಸಿದ್ದರಾಮಯ್ಯ, ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು ಮತ್ತು ಯಾವ ದೃಷ್ಟಿಯಿಂದಲೂ ದುರ್ಬಲ ಅಭ್ಯರ್ಥಿಯಲ್ಲ ಎಂದು ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಮಗನನ್ನೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಾ? ಎಷ್ಟೇ ಭಾವನಾತ್ಮಕವಾಗಿ ಮಾತನಾಡಿದರೂ ಮಂಡ್ಯದಲ್ಲಿ ಗೆಲ್ಲುವುದಿಲ್ಲ. ಹಾಸನದಿಂದ ಬಂದಿರುವ ಕುಮಾರಸ್ವಾಮಿ ಅವರಿಗೆ ಮಂಡ್ಯ ಕರ್ಮಭೂಮಿಯಾಗಿದ್ದು ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.