ಧರ್ಮದ ವಿಷಯದಲ್ಲಿ ಕೈ ಹಾಕಿದರೆ ಯಾರೂ ಉಳಿಯುವುದಿಲ್ಲ- ಸಂಸದ ಜಿಗಜಿಣಗಿ

ಹೊಸದಿಗಂತ ವರದಿ ವಿಜಯಪುರ:

ಧರ್ಮದ ವಿಷಯದಲ್ಲಿ ಯಾರೂ ಕೈ ಹಾಕಬಾರದು, ಹಾಗೇನಾದರೆ ಮಾಡಿದರೆ ಅಂತಹವರು ಉಳಿಯುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದಲ್ಲಿ ವಿಚಾರದಲ್ಲಿ ಯಾರೇ ಕೈ ಹಾಕಿದರೂ ಅವರು ಉಳಿಯುವುದಿಲ್ಲ. ಅದೇ ತರಹ ಅವರ ಪಕ್ಷ ಕೂಡ ಉಳಿಯುವುದಿಲ್ಲ ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ಹರಿಹಾಯ್ದರು.

ಅಲ್ಲದೇ, ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ತಪ್ಪಲ್ಲ. ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಹೋಗುತ್ತೇವೆ ಎಂದರೆ ತಪ್ಪಾಗಲಾರದು. ಪಕ್ಷ ನಿರ್ಣಯ ಮಾಡಿದರೆ ಒಪ್ಪಿಗೆ ಇದೆ ಎಂದರು. ಪಕ್ಷದವರು ನಿರ್ಣಯ ಮಾಡಿದರೆ ನಾನು ಸ್ವಾಗತ ಮಾಡುತ್ತೇನೆ. ಹಿಂದೆ ದೇವೇಗೌಡರ ಸರ್ಕಾರದಲ್ಲಿ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!