ಹೊಸದಿಗಂತ ವರದಿ,ವಿಜಯಪುರ:
ಕಾಂಗ್ರೆಸ್ ಅನ್ನು ಸಿದ್ದರಾಮಯ್ಯರೇ ಬಿಟ್ಟರೆ ಅಚ್ಚರಿ ಇಲ್ಲ. ಸಿದ್ದರಾಮಯ್ಯ ಮುಗಿಸೋದೆ ಡಿಕೆಶಿ ಪಾದಯಾತ್ರೆ ಉದ್ದೇಶ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ. ಈ ಬಿಡೋರ ಲಿಸ್ಟ್ ಹೇಳೋಕೆ ಆಗಲ್ಲ. ಎಲ್ಲಾನೂ ಕಾಲಕಾಲಕ್ಕೆ ಹೇಳುತ್ತೆನೆ ಎಂದು ಹೊಸ ಬಾಂಬ್ ಸಿಡಿಸಿದರು.