ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಸೇರಿದಂತೆ ಉತ್ತರದ ಇತರೆ ರಾಜ್ಯಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಬೆಳಿಗ್ಗೆ 6 ಗಂಟೆಯ ಸುಮಾರಿಗೆ 25 ಮೀ ಗಿಂತ ಕಡಿಮೆ ಗೋಚರತೆಯಿದೆ. ವಾಹನಗಳು ತಮ್ಮ ಹೆಡ್ಲೈಟ್ಗಳನ್ನು ಆನ್ ಮಾಡಿರುವುದು ಕಂಡು ಬಂದಿತು. ಜನರು ಪೆಟ್ರೋಲ್ ಬಂಕ್ಗಳ ಸುತ್ತಲೂ ಮತ್ತು ಬೀದಿ ಮೂಲೆಗಳಲ್ಲಿ ಚಳಿಯನ್ನು ಹೋಗಲಾಡಿಸಲು ಬೆಂಕಿ ಹಾಕಿ ಚಳಿ ಕಾಯಿಸುತ್ತಿದ್ದಾರೆ.
ಉಪಗ್ರಹ ಚಿತ್ರಣ ಮತ್ತು IMD ಯಿಂದ ಲಭ್ಯವಿರುವ ಗೋಚರತೆಯ ಮಾಹಿತಿಯ ಪ್ರಕಾರ, ಮಂಜು ಪದರವು ಪಂಜಾಬ್ ಮತ್ತು ಪಕ್ಕದ ವಾಯುವ್ಯ ರಾಜಸ್ಥಾನದಿಂದ ಬಿಹಾರದವರೆಗೆ ಹರಿಯಾಣ, ಚಂಡೀಗಢ ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ವಿಸ್ತರಿಸಿದೆ.
ರಾಷ್ಟ್ರ ರಾಜಧಾನಿಯನ್ನು ಆವರಿಸಿದ ದಟ್ಟವಾದ ಮಂಜು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬಕ್ಕೆ ಕಾರಣವಾಯಿತು. ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಜಿನ ಕಾರಣದಿಂದ ವಿಮಾಣಗಳು ತಡವಾಗಿ ಓಡುತ್ತಿವೆ. ಬದಲಾವಣೆ ಪ್ರತಿಕ್ರಿಯೆಗಳಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ವಿನಂತಿಸಲಾಗಿದೆ.
ರಾಜಧಾನಿ ಎಕ್ಸ್ಪ್ರೆಸ್ ರೈಲುಗಳು ಸೇರಿದಂತೆ ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ ಸೋಮವಾರ 29 ರೈಲುಗಳು ತಡವಾಗಿ ಓಡುತ್ತಿವೆ. ಮಂಜು, ಚಳಿಯಿಂದಾಗಿ ತಡವಾಗಿ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು.