ಈಗ ಎಲ್ಲವೂ ಕೈ ಮೀರಿ ಹೋಗಿವೆ, ಪ್ರಧಾನಿ ಮೋದಿಗೆ ನಿರ್ದೇಶಕ ಅನುರಾಗ್ ಕಶ್ಯಪ್ ಈ ರೀತಿ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ‘ಸಂಬಂಧ ಇಲ್ಲದ ಅದರಲ್ಲೂ ಮುಖ್ಯವಾಗಿ ಸಿನಿಮಾಗೆ ಸಂಬಂಧಿಸಿ ಹೇಳಿಕೆ ನೀಡಬೇಡಿ. ಇದರಿಂದ ಅಭಿವೃದ್ಧಿ ಅಜೆಂಡಾ ಹಿಂದೆ ಸರಿಯುತ್ತದೆ’ ಎಂದು ಕಾರ್ಯಕರ್ತರಿಗೆ ಹೇಳಿದ್ದರು.

ಇದೀಗ ಈ ಹೇಳಿಕೆ ಕುರಿತು ಮಾತನಾಡಿದ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap) ಅವರು ಮೋದಿ ಅವರು ನೀಡಿದ ಸೂಚನೆ ವಿಚಾರವನ್ನು ಅನುರಾಗ್ ಕಶ್ಯಪ್ ಟೀಕಿಸಿದ್ದಾರೆ.

ಈ ಸೂಚನೆಯನ್ನು ಮೋದಿ ಅವರು ನಾಲ್ಕು ವರ್ಷಗಳ ಹಿಂದೆ ಅವರು ಇದನ್ನು ಹೇಳಿದ್ದರೆ, ಅದರಿಂದ ವ್ಯತ್ಯಾಸ ಉಂಟಾಗುತ್ತಿತ್ತು. ಈಗ, ಅವರ ಹೇಳಿಕೆಯಿಂದ ಬದಲಾವಣೆ ಆಗುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಈಗ ಎಲ್ಲವೂ ಕೈ ಮೀರಿ ಹೋಗಿವೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ’ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!