ಹೊಸದಿಗಂತ ವರದಿ, ತುಮಕೂರು
ಸಿಇಟಿ ಪರೀಕ್ಷೆಯ ನಿಯಮವನ್ನು ಅಧಿಕಾರಿಗಳು ಮೊದಲು ತಿಳಿದುಕೊಳ್ಳಬೇಕು ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಆಯಾ ಧರ್ಮದ ಸಂಪ್ರದಾಯ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ. ಆಸ್ತಿಕರಾಗಿ, ನಾಸ್ತಿಕರಾಗಿ ಬದುಕಲು ಸಂವಿಧಾನದಲ್ಲಿ ಅವಕಾಶ ಇದೆ. ಅಂತಹ ಧಾರ್ಮಿಕ ಆಚರಣೆಗಳನ್ನು ಯಾರೇ ಮಾಡಿದರು ಅದನ್ನ ಒಪ್ಪಬೇಕಾಗಿದೆ ಎಂದರು.
ಸಿಇಟಿ ಪರೀಕ್ಷಾ ನಿಯಮದಲ್ಲಿ ಯಾವುದೇ ಗೊಂದಲ ಆಗದ ದೃಷ್ಟಿಯಿಂದ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೆ ಕೆಲವರು ಬುರ್ಖಾ ಹಾಕಿಕೊಂಡು ಬರ್ತೀನಿ ಅಂತಾರೆ. ಬುರ್ಖಾ ಹಾಕೊಂಡು ಬಂದರೆ ಯಾರೂ ಅನ್ನೋದು ಗೊತ್ತಾಗಲ್ಲ, ಅದು ಗೊಂದಲ ಉಂಟು ಮಾಡುತ್ತದೆ. ಇನ್ನೂ ಕೆಲವರು ಇನ್ನೊಂದು ಹಾಕಿಕೊಂಡು ಬರ್ತೀನಿ ಅಂತಾರೆ ಅವಾಗ ಗೊಂದಲ ಆಗುತ್ತೆ. ಈ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚನೆ ಮಾಡಿ. ಸರ್ಕಾರ ಗೊಂದಲ ನಿವಾರಣೆ ಮಾಡಿ ಸೂಕ್ತ ಕ್ರಮ ಕೈಗೊಂಡರೆ ಸೂಕ್ತ ಎಂದು ಸಲಹೆ ನೀಡಿದರು.