CINE| ತಿಮ್ಮಪ್ಪನ ದೇವಸ್ಥಾನದ ಮುಂದೆ ತಪ್ಪೆಸಗಿದ ನಿರ್ದೇಶಕ ಓಂ ರಾವುತ್:‌ ಭಕ್ತಾದಿಗಳು ಸಿಡಿಮಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಭಾಸ್ ಮತ್ತು ಕೃತಿ ಸನನ್ ನಟಿಸಿರುವ ರಾಮಾಯಣ ಆಧಾರಿತ ಆದಿಪುರುಷ್‌ ಚಿತ್ರ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ಮೊನ್ನೆ ತಿರುಪತಿಯಲ್ಲಿ ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಬಳಿಕ ನಿರ್ದೇಶಕ ಓಂ ರಾವುತ್‌ ಮಾಡಿದ ಕೆಲಸವೀಗ ಭಕ್ತರನ್ನು ಕೆರಳಿಸುತ್ತಿದೆ.

ಪ್ರಭಾಸ್, ಕೃತಿ ಸನೋನ್, ನಿರ್ದೇಶಕ ಓಂ ರಾವುತ್, ನಿರ್ಮಾಪಕ ಭೂಷಣ್ ಕುಮಾರ್ ಮತ್ತು ಇತರ ಕೆಲವು ಚಿತ್ರತಂಡ ನಿನ್ನೆ ಬೆಳಗ್ಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಅರ್ಚನಾ ಸೇವೆಯಲ್ಲಿ ಪಾಲ್ಗೊಂಡರು. ದೇವಸ್ಥಾನದಿಂದ ಹೊರಬಂದ ನಂತರ ಹೊರಡುವಾಗ ಕೃತಿಗಾಗಿ ಒಂದು ಕಾರು ವಿಶೇಷವಾಗಿ ಬಂದಿತ್ತು. ಈ ವೇಳೆ ಬೀಳ್ಕೊಡುವ ಸಂದರ್ಭದಲ್ಲಿ ನಿರ್ದೇಶಕ ಓಂ ರಾವತ್ ಕೃತಿಗೆ ಅಪ್ಪುಗೆ ನೀಡಿ, ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.

ಪವಿತ್ರ ದೇವಾಲಯದ ಬಳಿ ಇಂತಹ ಕೆಲಸಗಳನ್ನು ಏಕೆ ಮಾಡಲಾಗುತ್ತಿದೆ ಎಂದು ಓಂ ರಾವತ್ ವಿರುದ್ಧ ಕಿಡಿಕಾರಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿನಿಮಾ ಫುಲ್ ಪಾಸಿಟಿವ್ ಆಗಿರುವ ಸಮಯದಲ್ಲಿ, ನಿರ್ದೇಶಕ ಓಂ ರೌತ್ ಮತ್ತು ಕೃತಿ ಸನನ್ ಮಾಡಿದ ಕೆಲಸದಿಂದ ಆದಿಪುರುಷ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!