ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಅಕ್ರಮ ಕಟ್ಟೆಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಕೆ.ಆರ್.ಪುರಂನಲ್ಲಿ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಬುಲ್ಡೋಜರ್ಗಳ ಸಮೇತ ಕಾರ್ಯಾಚರಣೆಗಿಳಿದಿವೆ. ಮನೆಯೊಂದರ ಬಳಿ ತೆರಳಿ ಕೆಡವಲು ಮುಂದಾದಾಗ ಆ ಮನೆಯ ಮಾಲೀಕರು ನಮ್ಮ ಮನೆ ಕೆಡವಬೇಡಿ, ಕಡೆವಿದರೆ ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ.
ಅಧಿಕಾರಿಗಳು ಯಾವುದಕ್ಕೂ ಬಗ್ಗದೆ ತಮ್ಮ ಕೆಲಸವನ್ನು ಮುಂದುವರೆಸಿದರು. ಆಗ ಮನೆಯ ಹೊರಗಿನ ಗೋಡೆಯ ಬಳಿ ತೆರಳಿ ದಂಪತಿ ದೇಹಕ್ಕೆ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ ಮಾಡಿದ್ದಾರೆ. ಕೂಡಲೇ ದಂಪತಿ ಮೇಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರು ಸುರಿದು ಅವರನ್ನು ವಶಕ್ಕೆ ಪಡೆದು ಕಟ್ಟಡವನ್ನು ತೆರವುಗೊಳಿಸಿದರು.
ಈ ದಂಪತಿ ಮನೆ ನಿರ್ಮಾಣದಿಂದ 2 ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿರುವ ಸ್ಥಳದಲ್ಲಿ ಕಟ್ಟಡದ ಕಂಬವೂ ಇದೆ. ಕಂಬ ಬಿದ್ದರೆ ಇಡೀ ಕಟ್ಟಡ ಉರುಳುವ ಭೀತಿಯಿಂದ ಹೀಗೆ ಮಾಡಿದ್ದಾರೆ. 15 ವರ್ಷಗಳ ಹಿಂದೆ 40 ಲಕ್ಷ ಸಾಲ ರೂಪಾಯಿ ಸಾಲ ಮಾಡಿ ಈ ಮನೆ ಕಟ್ಟಿಕೊಂಡಿದ್ದೇವೆ. ಲಾಕ್ಡೌನ್ ಸಮಯದಿಂದ ಕೆಲಚವಿಲ್ಲದ ಎಕಂಗಾಲಾಗಿದ್ದೇವೆ ಇರುವ ಮನೆ ಕಳೆದುಕೊಂಡು ಎಲ್ಲಿಗೆ ಹೋಗುವುದು. ನಮ್ಮ ಮನೆ ಕೆಡವಲು ಬಿಡುವುದಿಲ್ಲ ಎಂದು ದಂಪತಿ ಆತ್ಮಹತ್ಯೆಗೆ ಯತ್ನಿಸಿದರು.
Soona Sen & Sunil Singh a couple in #Bengaluru are threatening to commit suicide by pouring petrol if the #BBMP goes ahead with demolition of a portion of their wall. BBMP has resumed demolishing illegal structures which are built on storm water drain.#Karnataka #Bangalore pic.twitter.com/YiYb2sc2qU
— Hate Detector 🔍 (@HateDetectors) October 12, 2022