ಹೊಸದಿಗಂತ ಡಿಜಿಟಲ್ ಡೆಸ್ಕ್
ತರಕಾರಿ ಖರೀದಿಗೆಂದು ಮಾರುಕಟ್ಟೆಗೆ ಹೋಗಿದ್ದ ಜೈಪುರ ಕಾಂಗ್ರೆಸ್ ನಾಯಕನ 21 ವರ್ಷದ ಮಗಳನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಬಗ್ಗೆ ಜೈಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೋಮವಾರ ಸಂಜೆ ಪ್ರತಾಪ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಗೋಪಾಲ್ ಕೇಶವತ್ ನೀಡಿದ ದೂರಿನ ಪ್ರಕಾರ, ಅವರ ಮಗಳು ಅಭಿಲಾಶಾ ಅವರಿಗೆ ಸೋಮವಾರ ಸಂಜೆ 5:50 ರ ಸುಮಾರಿಗೆ ತನ್ನ ಸ್ಕೂಟರ್ನಲ್ಲಿ ತರಕಾರಿ ಮಾರುಕಟ್ಟೆಗೆ ಹೋಗಿದ್ದರು.
“ಸಂಜೆ 6:03 ರ ಸುಮಾರಿಗೆ ಅವಳಿಂದ ನನಗೆ ಕರೆ ಬಂದಿತು, ಅಲ್ಲಿ ಕೆಲವು ಪುರುಷರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಮತ್ತು ಬೇಗನೆ ಬರುವಂತೆ ನನ್ನನ್ನು ಕೇಳಿಕೊಂಡಳು” ಎಂದು ಕೇಶವತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಆದರೆ ಮಗಳು ಪತ್ತೆಯಾಗಲಿಲ್ಲ. ಜೊತೆಗೆ ಆಕೆಯ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಪೊಲೀಸ್ ದೂರಿನಲ್ಲಿ ಕೇಶವತ್ ಕೆಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ, ಈ ವ್ಯಕ್ತಿಗಳು ತನಗೆ ಮತ್ತು ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ತಾನು ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿದ್ದು, ಮದ್ಯಪಾನ ನಿಷೇಧದ ಆಂದೋಲನ ನಡೆಸುತ್ತಿರುವುದರಿಂದ ಆಗಾಗ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ