ಇಯರ್ ಫೋನ್ ಹಾಕಿಕೊಂಡು ರೈಲು ಹಳಿ ಮೇಲೆ ವಾಕ್: ಮೂವರು ಯುವಕರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿಕೊಂಡು ಬಿಟ್ರೆ ಯುವಜನತೆಗೆ ಅಕ್ಕ-ಪಕ್ಕ ಏನ್‌ ನಡೀತಾ ಇದೆ ಗೊತ್ತಾಗಲ್ಲ. ಈಗಾಗಲೇ ಇದರ ಚಾಳಿಗೆ ಸಿಲುಕಿ ಅನೇಕರ ಪ್ರಾಣಕಳೆದುಕೊಂಡಿರುವುದು ನೋಡಿ, ಕೇಳಿರುತ್ತಾರೆ. ಆದರೂ ಕಿವಿಗೆ ಇಯರ್‌ಫೋನ್‌ ಹಾಕೋಳೋದು ಮಾತ್ರ ಬಿಡಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಭದೋಹಿ ರೈಲು ನಿಲ್ದಾಣದಲ್ಲಿ ಇಬ್ಬರು ಮತ್ತು ಅಹಿಂಪುರ ರೈಲು ನಿಲ್ದಾಣದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕೃಷ್ಣ ಅಲಿಯಾಸ್ ಬಂಗಾಲಿ (20) ಮತ್ತು ಆತನ ಸ್ನೇಹಿತ ಮೋನು (18) ಊಟ ಮುಗಿಸಿ ಭದೋಹಿ ರೈಲು ಹಳಿ ಮೇಲೆ ಇಯರ್‌ಫೋನ್‌ ಹಾಕಿಕೊಂಡು ನಡೆದು ಹೋಗುತ್ತಿದ್ದರು. ಅದೇ ಹಳಿ ಮೇಲೆ ಹೌರಾ-ಲಾಲ್ಕುವಾನ್ ಎಕ್ಸ್‌ಪ್ರೆಸ್ ರೈಲು ಬರುತ್ತಿದೆ. ಇಯರ್ ಫೋನ್ ಹಾಕಿದ್ದರಿಂದ ಇಬ್ಬರಿಗೂ ರೈಲು ಬರುತ್ತಿರುವ ಶಬ್ಧ ಕೇಳಲಿಲ್ಲ. ರೈಲಿಗೆ ಸಿಲುಕಿ ಕೃಷ್ಣ ಮೋನು ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ, ದಲ್ಪತ್‌ಪುರ ಗ್ರಾಮದ ಪಂಕಜ್ ದುಬೆ (30) ಅಹಿಂಪುರ ರೈಲ್ವೆ ಹಳಿ ಮೇಲೆ ಇಯರ್‌ಫೋನ್‌ ಹಾಕಿ ನಡೆದುಕೊಂಡು ಹೋಗುತ್ತಿರುವ ವೇಳೆ ಪ್ಯಾಸೆಂಜರ್ ರೈಲು ಹರಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!