ಹೊಸ ದಿಗಂತ ವರದಿ, ಜಮಖಂಡಿ:
ರಾಜ್ಯದಲ್ಲಿ ಹುಲ್ಲೆಬ್ಬಿಸಿದ ಪಿಎಸೈ ನೇಮಕಾತಿಯಲ್ಲಾದ ಅಕ್ರಮದ ಚುರುಕಿನ ತನಿಖೆಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಓರ್ವ ವ್ಯಕ್ತಿ ಶ್ರೀಕಾಂತ ದುಂಡಪ್ಪಾ ಚೌರಿ ಎನ್ನುವವರನ್ನು ಸಿಐಡಿ ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಪಿಎಸೈ ನೇಮಕಾತಿಯಲ್ಲಾದ ಅಕ್ರಮದ ಸುಳಿವಿನಿಂದ ಗ್ರಾಮದಲ್ಲಿ ಇಂದು ಸಿಐಡಿ ಪೋಲಿಸರು ದಾಳಿ ನಡೆಸಿ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆoದು ತಿಳಿದುಬಂದಿದೆ ಅದರಲ್ಲಿ ಒಬ್ಬರು ಶೀಕಾಂತ ದುಂಡಪ್ಪಾ ಚೌರಿ ಮತ್ತು ಇನ್ನೋರ್ವರ ಹೆಸರು ತಿಳಿದು ಬಂದಿಲ್ಲಾ.
ತೊದಲಬಾಗಿ ಗ್ರಾಮದ ಯುವಕ ಶ್ರೀಕಾಂತ ದುಂಡಪ್ಪಾ ಚೌರಿ ಯಾವ ಕೆಲಸ ಮಡುತ್ತಾನೆ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲಾ ಆತನನ್ನು ಸಿಐಡಿ ಪೋಲಿಸರು ತಮ್ಮ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ. ಸಾವಳಗಿ ಠಾಣೆಯಲ್ಲಿ ಯಾವುದೆ ತರಹದ ಮಾಹಿತಿ ಇಲ್ಲ ಎಂದು ಸಾವಳಗಿ ಪಿ.ಎಸ್.ಐ ತಿಳಿಸಿದ್ದಾರೆ